ಕರ್ನಾಟಕ

ನಡು ರಸ್ತೆಯಲ್ಲೇ ರೌಡಿ ಕೊಲೆ : ಜೈಲಿನಿಂದ ಹೊರ ಬಂದ ಚಂಡಾಲ 3 ತಿಂಗಳಲ್ಲೇ ಫಿನಿಶ್

Pinterest LinkedIn Tumblr

murderಬೆಂಗಳೂರು, ನ.19- ಜಾಮೀನು ಮೇಲೆ ಜೈಲಿನಿಂದ ಹೊರ ಬಂದಿದ್ದ ರೌಡಿಶೀಟರ್‌ನನ್ನು ಮತ್ತೊಂದು ರೌಡಿ ಗುಂಪು ಲಾಂಗ್, ಮಚ್ಚಿನಿಂದ ಮನಬಂದಂತೆ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರು ರಸ್ತೆ ಗಿರಿಪುರ ನಿವಾಸಿ ಸಂಜಯ್‌ಕುಮಾರ್ ಅಲಿಯಾಸ್ ಚಂಡಾಲ(22) ಕೊಲೆಯಾದ ರೌಡಿಶೀಟರ್. ಕಾಟನ್‌ಪೇಟೆ, ಚಾಮರಾಜಪೇಟೆ ಠಾಣೆಗಳ ರೌಡಿಪಟ್ಟಿಯಲ್ಲಿರುವ ಈತನನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತೀಚೆಗೆ ಜಾಮೀನು ಮೇಲೆ ಹೊರಬಂದಿದ್ದ ಈತನ ಮೇಲೆ ಕೊಲೆಯತ್ನ, ರಾಬರಿ, ಸರಕಳವು, ದರೋಡೆ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 12 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರು ರಸ್ತೆ ಬಾಬುಲೇನ್‌ನ ಹೊಟೇಲ್‌ವೊಂದರಲ್ಲಿ ಟೀ ಕುಡಿಯುತ್ತ ನಿಂತಿದ್ದ ಸಂಜಯ್‌ಕುಮಾರ್‌ನ ಮೇಲೆ ಬೈಕ್‌ನಲ್ಲಿ ಬಂದ ಮತ್ತೊಂದು ರೌಡಿ ಗುಂಪಿನ 5 ಜನ ಏಕಾಏಕಿ ದಾಳಿ ನಡೆಸಿದ್ದಾರೆ. ಮಚ್ಚು, ಲಾಂಗ್‌ಗಳಿಂದ ಮನಬಂದಂತೆ ತಲೆ, ಕೈ-ಕಾಲುಗಳ ಮೇಲೆ ಕೊಚ್ಚಿ ಪರಾರಿಯಾಗಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಚಾಮರಾಜಪೇಟೆ ಠಾಣೆ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಜಯ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರಾದರೂ ರಾತ್ರಿ 10.30ರಲ್ಲಿ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ. ಸ್ಥಳಕ್ಕೆ ಡಿಸಿಪಿ ಲೋಕೇಶ್‌ಕುಮಾರ್ ಭೇಟಿ ನೀಡಿ ಶೀಲಿಸಿದ್ದಾರ. ಹಳೇ ದ್ವೇಷದಲ್ಲಿ ಮತ್ತೊಂದು ರೌಡಿ ಗ್ಯಾಂಗ್ ದಿಲೀಪ್ ಅಲಿಯಾಸ್ ಪಟ್ಟಾಭಿ ಹಾಗೂ ಆತನ 5 ಜನ ಸಹಚರರು ಕೃತ್ಯ ಎಸಗಿದ್ದಾರೆ ಎಂದು ಡಿಸಿಪಿ ಈ ಸಂಜೆಗೆ ತಿಳಿಸಿದ್ದಾರೆ.ಆರೋಪಿಗಳ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

Write A Comment