ತೆಲಂಗಾಣ: ತೆಲಂಗಾಣದ ಕಮ್ಮಂ ಜಿಲ್ಲೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್)ಯ ಆರು ಮಂದಿ ಮುಖಂಡರನ್ನು ಕಳೆದ ರಾತ್ರಿ ನಕ್ಸಲರು ಅಪಹರಿಸಿದ್ದಾರೆ.
ನಕ್ಸಲರ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ಹಾಗೂ ನಕಲಿ ಎನ್ಕೌಂಟರ್ ಸ್ಧಗಿತಕ್ಕೆ ಆಗ್ರಹಿಸಿ ನಕ್ಸಲರು ಟಿಆರ್ಎಸ್ ನ ಆರು ಮಂದಿ ಮುಖಂಡರಾದ ರಾಮಕೃಷ್ಣ, ಸುರೇಶ್, ನರಸಿಂಹ, ವೆಂಕಟೇಶ್ವರಲು, ಯು. ರಾಮಕೃಷ್ಣ ಹಾಗೂ ಸತ್ಯನಾರಾಯಣ ಎಂಬುವರನ್ನು ಅಪಹರಿಸಿದ್ದಾರೆ.
ಟಿಆರ್ಎಸ್ ಮುಖಂಡರನ್ನು ಅಪಹರಿಸಿರುವ ನಕ್ಸಲರು ಅಪಹರಣ ಸ್ಥಳದಲ್ಲಿ ಪತ್ರವನ್ನು ಇರಿಸಿದ್ದು, ಪತ್ರದಲ್ಲಿ ನಕ್ಸಲರ ನಕಲಿ ಎನ್ಕೌಂಟರ್ ಹಾಗೂ ಕೂಂಬಿಂಗ್ ಕಾರ್ಯಾಚರಣೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.