ಬೆಂಗಳೂರು: ಹುಚ್ಚ ವೆಂಕಟ್ ಗಾಯಕ ರವಿ ಮುರೂರ್ಗೆ ಹೊಡೆದದ್ದು ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ರಕ್ತ ಬರುವಂತೆ ಹೊಡೆದರೂ ಕೋಪ ತಡೆದು ಕೂತರು ರವಿ. ಆದರೆ ಅದೇ ಏಟು ರೆಹಮಾನ್ರಿಗೆ ಬಿದ್ದಿದ್ದರೆ ಇನ್ನಷ್ಟು ವಿವಾದಗಳಿಗೆ ಕಾರಣವಾಗುತ್ತಿತ್ತೇನೋ.
ಮೊನ್ನೆ ಬಿಗ್ಬಾಸ್ ಮನೆಯಲ್ಲಿ ನಡೆದ ಚರ್ಚೆಯಲ್ಲಿ ರವಿ, ವೆಂಕಟ್ ನನಗೆ ಕೆಲವು ಪಾಠಗಳನ್ನು ಕಲಿಸಿದ್ದಾರೆ ಎಂದರೆ, ರೆಹಮಾನ್ ಮಾತ್ರ ವೆಂಕಟ್ ನನ್ನ ಮೇಲೆ ಕೈ ಎತ್ತಿದ್ದರೆ ನಾನೂ ಕೂಡ ಹೊಡೆಯುತ್ತಿದೆ ಎಂದು ಹೇಳಿದ್ದಾರೆ.
ರಾಜ ಗುಲಾಮ ಟಾಸ್ಕ್ನಲ್ಲಿಯೇ ಅವರಿಬ್ಬರ ಮಧ್ಯೆ ನಡೆದ ಜಗಳ ಅತಿರೇಕಕ್ಕೆ ಹೋಗಿ ಕೈ ಕೈ ಮಿಲಾಯಿಸುವ ಎಲ್ಲಾ ಲಕ್ಷಣಗಳೂ ಇದ್ದವು. ಆದರೆ ವೆಂಕಟ್ ಅದನ್ನೆಲ್ಲಾ ಬಿಟ್ಟು ಒಂದು ಕ್ಷುಲ್ಲಕ ಕಾರಣಕ್ಕೆ ರವಿಯನ್ನು ಹೊಡೆದರು. ಹುಚ್ಚ ವೆಂಕಟ್ ಸೇನೆ ಬಗ್ಗೆ ಮಾತನಾಡಿದ್ದಕ್ಕೆ, ಮಾನ ಮರಿಯಾದೆ ಇಲ್ವಾ ಎಂದಿದ್ದಕ್ಕೆ ಹುಚ್ಚ ವೆಂಕಟ್ ಕೋಪ ನೆತ್ತಿಗೇರಿತ್ತು. ಅದೇ ಸಮಯದಲ್ಲಿ ರೆಹಮಾನ್ ಕೂಡ ನಿನಗೆ ಮಾನ ಮರ್ಯಾದೆ ಇಲ್ಲ ಎಂದಾಗ ಇಬ್ಬರೂ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಮನೆಯ ಇತರರು ರೆಹಮಾನ್ನನ್ನು ತಡೆದಿದ್ದರಿಂದ ಅಂತಹದ್ದೇನೂ ಆಗಲಿಲ್ಲ.
ಒಂದು ವೇಳೆ ರವಿಗೆ ಬಿದ್ದ ಏಟು ರೆಹಮಾನ್ಗೆ ಬಿದ್ದಿದ್ದರೆ ಬಿಗ್ಬಾಸ್ ಮನೆಯಲ್ಲಿ ಅಲ್ಲೋಲ ಕಲ್ಲೋಲವೇ ಆಗುತ್ತಿತ್ತು ಎಂಬದಂತು ನಿಜ.