ನವದೆಹಲಿ: ರಾಯಗಡ ಜಿಲ್ಲೆಯ ಅರಣ್ಯದಲ್ಲಿ ದೊರೆತ ಶವ ಶೀನಾ ಬೋರಾ ಅವರದ್ದೇ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸ್ಪಷ್ಟಪಡಿಸಿದೆ.
ಅರಣ್ಯದಲ್ಲಿ ದೊರೆತ ಶವದ ಅಂಗಾಂಗಗಳ ಪರೀಕ್ಷೆ ನಡೆಸಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ತಜ್ಞರ ತಂಡವು ದೊರೆತ ಶವ ಶೀನಾ ಬೋರಾ ಅವರದ್ದೇ ಎಂಬುದನ್ನು ಖಚಿತಪಡಿಸಿದೆ.
ಶೀನಾ ಬೋರಾ ಅವರನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎಂದೂ ತಜ್ಞರ ತಂಡ ತಿಳಿಸಿದೆ. ರಾಯಗಡ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶೀನಾ ಬೋರಾ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಶೀನಾ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಂದ್ರಾಣಿ, ಆಕೆಯ ಪತಿ ಪೀಟರ್ ಮುಖರ್ಜಿ, ಇಂದ್ರಾಣಿ ಅವರ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಚಾಲಕ ಶ್ಯಾಂವರ್ ರಾಯ್ ಅವರನ್ನು ಬಂಧಿಸಿದ್ದಾರೆ.