ಹಾಸನ, ನ.8-ಪುರಾಣ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನಕ್ಕೆ ಇಂದೂ ಕೂಡ ಭಕ್ತಸಾಗರವೇ ಹರಿದುಬಂದಿತ್ತು. ರಾಜ್ಯಪಾಲ ವಜೂಬಾಯಿ ರೂಢಬಾಯಿ ವಾಲಾ, ಮಾಜಿ ಸಚಿವ ಸಿ.ಟಿ.ರವಿ ಇಂದು ದರ್ಶನ ಪಡೆದವರಲ್ಲಿ ಪ್ರಮುಖರು. ಇಂದು ಭಾನುವಾರ ರಜಾ ದಿನವಾದುದರಿಂದ ರಾಜ್ಯಾದ್ಯಂತ ಜನಸಾಗರವೇ ದೇವಿಯ ದರ್ಶನಕ್ಕೆ ಬಂದಿದ್ದಾರೆ.
ಮುಂಜಾನೆ 2 ಗಂಟೆಯಿಂದಲೇ ಜನ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು. ರಾಜ್ಯಪಾಲರು ಹಾಸನಾಂಬೆ ದೇವಿಯ ದರ್ಶನಕ್ಕೆ ಆಗಮಿಸಿದ್ದರಿಂದ ಅವರು ಸಂಚರಿಸುವ ಮಾರ್ಗ ಹಾಗೂ ದೇವಸ್ಥಾನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ನಿನ್ನೆಯಷ್ಟೆ ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರರು ದೇವಿಯ ದರ್ಶನ ಪಡೆದಿದ್ದರು. ಗಣ್ಯಾತಿಗಣ್ಯರು ದೇವಿಯ ದರ್ಶನಕ್ಕೆ ಬಂದಾಗ ಸರತಿ ಸಾಲಿನಲ್ಲಿ ಮಧ್ಯರಾತ್ರಿಯಿಂದಲೇ ನಿಂತು ಕಾಯುವ ಭಕ್ತರಿಗೆ ತೊಂದರೆಯಾಗುತ್ತಿರುವುದರಿಂದ ಪೊಲೀಸರ ಜೊತೆಗೆ ಭಕ್ತರು ಮಾತಿನ ಚಕಮಕಿ ನಡೆಸುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.