ಕರ್ನಾಟಕ

ಬೀಡಿ ಸೇದಲು ಹಣ ನೀಡದ್ದಕ್ಕೆ ಎತ್ತಿ ಹಾಡಿಸಿ ಬೆಳೆಸಿದ ತಾತನನ್ನು ಕಲ್ಲು ಎತ್ತಿ ಹಾಕಿ ಕೊಂದ ಮೊಮ್ಮಗ !

Pinterest LinkedIn Tumblr

murder-2

ಮೈಸೂರು: ತಾನೇ ಎತ್ತಿ ಹಾಡಿಸಿ ಬೆಳೆಸಿದ ಕೂಸು ಆತ. ತಂದೆ ತಾಯಿಯರಿಗೇ ಬೇಡವಾದ ಮಗನನ್ನು ಅಜ್ಜ ತುಂಬಾ ಪ್ರೀತಿಯಿಂದ ಸಾಕಿ ಸಲಹಿದ್ದರು. ಪಾಪ ತಾನೇ ಬೆಳಸಿ ದೊಡ್ಡವನು ಮಾಡಿದ ಮೊಮ್ಮಗನಿಂದಲೇ ಸಾಯುತ್ತೇನೆ ಎಂಬು ಸತ್ಯ ಆ ಹಿರಿಯ ಜೀವಕ್ಕೆ ಗೊತ್ತಾಗಲೇ ಇಲ್ಲ. ಕೇವಲ ಕ್ಷುಲ್ಲಕ ಕಾರಣಕ್ಕೆ ತನ್ನನ್ನು ಬೆಳೆಸಿ ದೊಡ್ಡವನು ಮಾಡಿದ ತಾತನನ್ನು ಕೊಂದ ಪಾಪಿ ಈಗ ಜೈಲು ಸೇರಿದರೆ, ಪ್ರೀತಿಯಿಂದ ಸಾಕಿ ಬೆಳೆಸಿದ ಹಿರಿಯ ಜೀವ ಈಗ ವಿಧಿಯಾಟಕ್ಕೆ ಬಲಿಯಾಗಿ ಮಸಣ ಸೇರಿದೆ.

ಮೈಸೂರಿನ ಬನ್ನಿಮಂಟಪ ಕೈಗಾರಿಕಾ ಪ್ರದೇಶದಲ್ಲಿ ಬೀಡಿ ಸೇದಲು ಹಣ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ 26 ವರ್ಷದ ಮೊಮ್ಮಗ ರಘು ತನ್ನ ಅಜ್ಜನ ಮೇಲೆ ಕಲ್ಲು ಹಾಕಿ ಸಾಯಿಸಿದ್ದಾನೆ. 69 ವರ್ಷದ ಮಹದೇವಪ್ಪ ಮೃತ ಪಟ್ಟಿದ್ದು, ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ರಘುವನ್ನು ಬಂಧಿಸಿದ್ದಾರೆ.

ಮಹದೇವಪ್ಪ ಹತ್ತು ವರ್ಷಗಳಿಂದ್ದ ಮಹೇಶ್ವರಿ ಏಜೆನ್ಸಿಯಲ್ಲಿ ವಾಚ್‍ಮನ್ ಆಗಿ ಕೆಲಸ ಮಾಡುತ್ತಿದ್ದರು. ಹಾಗೂ ತನ್ನ ಬಳಿಯೇ ಮೊಮ್ಮಗ ರಘುವನ್ನು ಸಾಕುತ್ತಿದ್ದರು. ಆರೋಪಿ ರಘು ಮಧ್ಯಾಹ್ನ ಬೀಡಿ ಸೇದಲು ಮನೆಯಲ್ಲಿದ್ದ ಮಹದೇವಪ್ಪ ಅವರ ಬಳಿ ಹಣ ಕೇಳಿದ್ದಾನೆ. ಆದರೆ ಮಹದೇವಪ್ಪ ತನ್ನ ಬಳಿ ಹಣ ಇಲ್ಲ ಎಂದಾಗ ಕೊಪಗೊಂಡ ರಘು ಅವರನ್ನು ನೂಕಿ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾನೆ.

ದೃಶ್ಯವನ್ನು ಕಣ್ಣಾರೆ ಕಂಡ ಅಲ್ಲೇ ಇದ್ದ ಜನ ಕೂಡಲೇ ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಮಂಡಿ ಠಾಣೆ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.

ಚಿಕ್ಕ ವಯಸ್ಸಿನಲೇ ದುಶ್ಚಟಗಳನ್ನು ಮೈಗೆ ಅಂಟಿಸಿಕೊಂಡಿದ್ದ ಮಗನನ್ನು ತಂದೆ ತಾಯಿ ಮನೆಯಿಂದ ಹೊರ ಹಾಕಿದ್ದರು. ಆವಾಗನಿಂದಲೂ ಅಜ್ಜಿ ಮತ್ತು ಅಜ್ಜ ಹಾರೈಕೆಯಲ್ಲಿ ರಘು ಬೆಳೆದಿದ್ದ. ಕೆಟ್ಟ ಸಹವಾಸ ಮಾಡಿ ದುಶ್ಚಟಗಳಿಗೆ ಬಲಿಯಾಗಿದ್ದ ಈತ ಬೀದಿ ಬೀದಿ ಅಲೆಯುತ್ತಿದ್ದ. ಬೀಡಿ ಸೀಗರೇಟು, ಗಾಂಜ ಹೀಗೆ ಈತನ ದುಶ್ಚಟಗಳಿಗೆ ಲೆಕ್ಕವೇ ಇರಲಿಲ್ಲ. ವಯಸ್ಸು 26 ದಾಟಿದ್ದರೂ ರಘು ದುಡಿಯಲು ಹೋಗುತ್ತಿರಲ್ಲ. ಹಾಗಾಗಿ ತನ್ನ ಚಟ ತೀರಿಸಿಕೊಳ್ಳಲು ಹಣಕ್ಕಾಗಿ ಮಾವನವರನ್ನು ಪೀಡಿಸುತ್ತಿದ್ದ ಎಂದು ಮಹದೇವಪ್ಪನವರ ಸೊಸೆ ನಳಿನಿ ಹೇಳಿದ್ದಾರೆ.

Write A Comment