ಕರ್ನಾಟಕ

ವಸತಿ ಸಚಿವ ಅಂಬರೀಶ್ ಸಾಧನೆ ಶೂನ್ಯ; ವಸತಿ ಇಲಾಖೆಗೆ ನೀಡಿದ್ದ 3, 818 ಕೋಟಿ ರುಪಾಯಿ ಪೈಕಿ, ಒಂದೇ ಒಂದು ಪೈಸೆ ಖರ್ಚು ಮಾಡದ ಅಂಬಿ !

Pinterest LinkedIn Tumblr

Ambi-BirthDay

ಬೆಂಗಳೂರು: ವಸತಿ ಸಚಿವ ಅಂಬರೀಶ್ ಅವರ ಸಾಧನೆ ಶೂನ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕ ಜಿ.ಎಚ್. ಶ್ರೀನಿವಾಸ್ ಅವರ ಪ್ರಶ್ನೆಗೆ ಇಂದು ವಿಧಾನಸಭೆಯಲ್ಲಿ ಲಿಖಿತ ಉತ್ತರ ನೀಡಿದ ಸಿಎಂ, ಪ್ರಸಕ್ತ ಆಯವ್ಯಯಕ್ಕೆ ಸಂಬಂಧಿಸಿದಂತೆ ಅಂಬರೀಶ್ ಅವರ ಸಾಧನೆ ಶೂನ್ಯ ಎಂದು ಹೇಳಿದರು.

ವಿಧಾನಸಭೆಗೆ ಈ ವರ್ಷದ ಆಯವ್ಯಯದಲ್ಲಿ ನೀಡಿದ್ದ ಭರವಸೆಗಳ ಅನುಷ್ಠಾನದ ವಿವರ ನೀಡಿದ ಸಿದ್ದರಾಮಯ್ಯ, 2015-16ನೇ ಸಾಲಿನಲ್ಲಿ ವಸತಿ ಇಲಾಖೆಗೆ ನೀಡಿದ್ದ 3, 818 ಕೋಟಿ ರುಪಾಯಿ ಪೈಕಿ, ಒಂದೇ ಒಂದು ಪೈಸೆ ಖರ್ಚಾಗಿಲ್ಲ ಎಂದರು. ಅಲ್ಲದೆ ಮೇ ತಿಂಗಳ ಅಂತ್ಯದವರೆಗೂ ವಸತಿ ಇಲಾಖೆ ಯಾವುದೇ ವೆಚ್ಚ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಚಿಕ್ಕಮಗಳೂರು ಜಿಲ್ಲೆ ತರೀಕರೆ ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಭರವಸೆಗಳ ಅನುಷ್ಠಾನದ ವಿವರ ಸೇರಿದಂತೆ ಮೂರು ಪ್ರಶ್ನೆಗಳನ್ನು ಕೇಳಿದ್ದರು.

Write A Comment