ಬೆಂಗಳೂರು, ಜು. ೫- ಬಸ್ ಪಾಸ್ನಲ್ಲಿ ಸಹಿ ಹಾಕದಿರುವುದನ್ನು ಪ್ರಶ್ನಿಸಿದ ಬಿಎಂಟಿಸಿ ಬಸ್ ಕಂಡಕ್ಟರ್ ದ್ಯಾವಣ್ಣಗೌಡ ಅವರ ಮೇಲೆ ಐವರು ನೈಜೀರಿಯಾದ ಯವತಿಯರು ಹಲ್ಲೆ ನಡೆಸಿ ರಂಪಾಟ ಮಾಡಿದ್ದಾರೆ.
ರಂಪಾಟ ಮಾಡಿದ ಐವರು ಯುವತಿಯರನ್ನು ವಿಲ್ಸನ್ಗಾರ್ಡನ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹಲ್ಲೆಗೊಳಗಾಗಿರುವ ದ್ಯಾವಣ್ಣಗೌಡ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಡಿಸಿಪಿ ಸಂದೀಪ್ಪಾಟೀಲ್ ತಿಳಿಸಿದ್ದಾರೆ.
ಮೆಜೆಸ್ಟಿಕ್ನಿಂದ ಆನೇಕಲ್ ಕಡೆಗೆ ಇಂದು ಬೆಳಿಗ್ಗೆ 10 ರಲ್ಲಿ ಹೋಗುತ್ತಿದ್ದ ಬಿಎಂಟಿಸಿ ಬಸ್ ಹತ್ತಿಕೊಂಡ ಐವರು ನೈಜೀರಿಯಾದ ಯುವತಿಯರು ಟಿಕೆಟ್ ಕೇಳಿದ ಕಂಡಕ್ಟರ್ ದ್ಯಾವಣ್ಣಗೌಡ ಅವರಿಗೆ ಪಾಸ್ ತೋರಿಸಿದ್ದಾರೆ.
ಪಾಸ್ನಲ್ಲಿ ಪ್ರಯಾಣಿಕರ ಸಹಿ ಇರದಿರುವುದನ್ನು ನೋಡಿ ಸಹಿ ಹಾಕಿ ತೋರಿಸುವಂತೆ ದ್ಯಾವಣ್ಣಗೌಡ ಸೂಚಿಸಿದಾಗ ಜಗಳ ತೆಗೆದ ಐವರು ಯವತಿಯರು ಕೈಯಿಂದ ಹಲ್ಲೆ ನಡೆಸಿ ಮುಖ ಪರಚಿ ರಂಪಾಟ ನಡೆಸಿದ್ದಾರೆ.
ಬಸ್ನಲ್ಲಿದ್ದ ಇತರ ಪ್ರಯಾಣಿಕರ ಯುವತಿಯರನ್ನು ತಡೆದು ವಿಲ್ಸನ್ಗಾರ್ಡನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು ಪ್ರಕರಣ ದಾಖಲಿಸಿದ ಪೊಲೀಸರು ಯುವತಿಯರನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.