ಕನ್ನಡ ವಾರ್ತೆಗಳು

ಗ್ರಾ.ಪಂ. ಸದಸ್ಯೆಗೆ ಕಿರುಕುಳ ನೀಡಿ ಅಸಭ್ಯ ವರ್ತನೆ ತೋರಿದ ಯುವಕನಿಗೆ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

Pinterest LinkedIn Tumblr

ಕುಂದಾಪುರ: ಇಲ್ಲಿನ ಮೊಳಹಳ್ಳಿ ಗ್ರಾ.ಪಂ. ಸದಸ್ಯೆಯಾಗಿರುವ ಸ್ಥಳಿಯ ಯುವತಿಯೋರ್ವರು ನಡೆದು ಬರುತ್ತಿದ್ದ ವೇಳೆ ನಿರ್ಜನ ಪ್ರದೇಶವಾದ ರಸ್ತೆಯಲ್ಲಿ ಆಕೆಯ ಹಿಂಬದಿಯಿಂದ ಬಂದ ಯುವಕನೋರ್ವ ಆಕೆಯ ಕೈ ಎಳೆದಿದ್ದು ಅಲ್ಲದೇ ಅಶ್ಲೀಲ ಮಾತುಗಳನ್ನಾಡಿ ಆಕೆಗೆ ಚುಡಾಯಿಸಿದ ಹಿನ್ನೆಲೆ ಆತ ಹಾಗೂ ಆತನಿಗೆ ಸಹಕಾರ ನೀಡಿದರೆನ್ನಲಾದ ಇನ್ನಿಬ್ಬರನ್ನು ಸಾರ್ವಜನಿಕರು ಹಿಡಿದು ಥಳಿಸಿ ಬಳಿಕ ಕೋಟ ಪೊಲಿಸರಿಗೆ ನೀಡಿದ ಘಟನೆ ಶನಿವಾರ ರಾತ್ರಿ ವರದಿಯಾಗಿದೆ.

ಕಿಶನ್ (20) ಎಂಬಾತನೇ ಕಿರುಕುಳ ನೀಡಿದನೆನ್ನಲಾದ ಆರೋಪಿಯಾಗಿದ್ದು, ಆತನಿಗೆ ಸಹಕರಿಸಿ ಈತನ್ ಕೃತ್ಯದಲ್ಲಿ ಭಾಗಿಯಾಗಿದ್ದರೆನ್ನಲಾದ ಕಿರಣ ಹಾಗೂ ಸತೀಶ್ ಎಂಬಿಬ್ಬರೇ ಗೂಸಾ ತಿಂದು ಪೊಲೀಸರ ಅತಿಥಿಯಾದವರಾಗಿದ್ದಾರೆ.

Molahalli_Boys_Arrest (3) Molahalli_Boys_Arrest (1) Molahalli_Boys_Arrest Molahalli_Boys_Arrest (2)

ಘಟನೆ ಹಿನ್ನೆಲೆ: ತಾಲೂಕಿನ ಮೊಳಹಳ್ಳಿ ಸ್ಥಳೀಯ ಪಂಚಾಯತ್ ಸದಸ್ಯೆಯಾಗಿರುವ ಅವಿವಾಹಿತೆ ಯುವತಿಯೋರ್ವರು ಶನಿವಾರ ಸಂಜೆ ವೇಳೆ ಮನೆಯತ್ತ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಹಿಂಬದಿಯಿಂದ ಮುಸುಕುಧಾರಿಯಾಗಿ ಬಂದ ಕಿಶನ್ ಆಕೆಯ ಕೈ ಹಿಡಿದೆಳೆದು ಆಕೆಗೆ ಅಸಭ್ಯವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ, ಆತನ ಹಿಡಿತದಿಂದ ಬಿಡಿಸಿಕೊಂಡ ಆಕೆ ಆತ ಮುಸುಕು ಧರ್ಸಿ‌ಇದ್ದನ್ನು ಎಳೆದಾಗ ಈತ ಕಿಶನ್ ಎಂಬುದು ತಿಳಿದಿದ್ದು ಕೂಡಲೇ ಅಲ್ಲಿಂದ ಆಕೆ ಕಾಲ್ಕಿತ್ತು ಮನೆಯತ್ತ ದೌಡಾಯಿಸಿ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಗೂ ದೂರನ್ನು ನೀಡಿದ್ದಾರೆ. ಇತ್ತ ಪೊಳಿಸರು ಹಾಗೂ ಸ್ಥಳೀಯರು ಈತ ಮತ್ತು ಈತನಿಗೆ ಸಹಕರಿದವರ ಪತ್ತೆಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಬಳಿಕ ಶನಿವಾರ ರಾತ್ರಿ ವೇಳೆ ಮೂವರು ಒಂದೇ ಬೈಕಿನಲ್ಲಿ ತಾಲೂಕಿನ ಅಮಾಸೆಬೈಲು ಎಂಬಲ್ಲಿ ತೆರಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಮೊಳಹಳ್ಳಿಯ ಸ್ಥ್ಳಿಯ ಕೆಲವರು ಅಲ್ಲಿಗೆ ಧಾವಿಸಿ ಮೂವರನ್ನು ಎಳೆದು ತಂದಿದ್ದಾರೆ. ಬಳಿಕ ಮೂವರಿಗೂ ಧರ್ಮದೇಟು ನೀಡಿ ಕೋಟ ಪೊಲಿಸರಿಗೆ ಒಪ್ಪಿಸಿದ್ದಾರೆ.

ಸದ್ಯ ಮೂವರು ಕೋಟ ಪೊಲೀಸರ ವಶದಲ್ಲಿದ್ದಾರೆ.

Write A Comment