ಕರ್ನಾಟಕ

ಫೇಸ್ ಬುಕ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದವನ ಅರೆಸ್ಟ್

Pinterest LinkedIn Tumblr

A smartphone user shows the Facebook application on his phone in Zenica, in this photo illustrationಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ಫೇಸ್ ಬುಕ್ ಅಕೌಂಟಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಗಜೇಂದ್ರಗಢ ಸಮೀಪದ ಕಾಲಕಾಲೇಶ್ವರ ಗ್ರಾಮದ ನಿವಾಸಿ ಗಂಗಾಧರ ಬಸನಗೌಡ ಪಾಟೀಲ ಎಂದು ಹೇಳಲಾಗಿದ್ದು, ಈತ ಗದಗ ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷನೆಂದು ತಿಳಿದುಬಂದಿದೆ.

ಬುಧವಾರದಂದು ಗಜೇಂದ್ರ ಗಢ ಪೊಲೀಸ್ ಠಾಣೆಗೆ ತೆರಳಿದ್ದ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಅವರ ನೆರವಿನೊಂದಿಗೆ ಗಂಗಾಧರ ಬಸನಗೌಡ ಪಾಟೀಲನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆ ತಂದಿದ್ದಾರೆ.

Write A Comment