ಮೈಸೂರು: ಮಹಿಳೆಯೊಬ್ಬರನ್ನು ಅಪಹರಿಸಿ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗೆ ಮೈಸೂರಿನ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಜತೆಗೆ 40,000 ದಂಡವನ್ನು ಕೂಡ ಹೇರಿದೆ.
ಕೆಸರೆ ನಿವಾಸಿಯಾಗಿರುವ ದುಷ್ಕರ್ಮಿ ಮಹೇಶ್(27) ಆರೋಪ ಸಾಬೀತಾಗಿದ್ದು 7ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ನೀಡಿದೆ.
2011ರಲ್ಲಿ ಮೈಸೂರಿನ ಅಗ್ರಹಾರದಿಂದ ಮಹಿಳೆಯನ್ನು ಅಪಹರಿಸಿದ್ದ ಮಹೇಶ್ ನಗರದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಂದು ಬೀಸಾಡಿದ್ದ.
ವಕೀಲ ಮಹಾಂತಪ್ಪ ಆರೋಪಿ ಮಹೇಶ್ ಪರ ವಾದಿಸಿದ್ದರು.
ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.