ಕೋಲಾರ: ಉದ್ಯಮಿಯೊಬ್ಬರು ಕುಟುಂಬದೊಂದಿಗೆ ಪರ ಊರಿಗೆ ತೆರಳಿದ್ದ ವೇಳೆ ಬೀಗ ಮುರಿದು ಒಳ ಪ್ರವೇಶಿಸಿರುವ ಕಳ್ಳರು 6 ಕೆ.ಜಿ. ಚಿನ್ನ ಹಾಗೂ 3 ಲಕ್ಷ ರೂ. ನಗದು ದೋಚಿರುವ ಘಟನೆ ಕೆಜಿಎಫ್ ನಲ್ಲಿ ನಡೆದಿದೆ.
ಗೀತಾ ರಸ್ತೆಯಲ್ಲಿರುವ ಉದ್ಯಮಿ ಪ್ರಕಾಶ್ ಎಂಬವರು ಸಂಬಂಧಿಕರ ಮನೆಗೆ ತೆರಳಿದ್ದು, ಈ ವೇಳೆ ಕಳ್ಳತನ ನಡೆದಿದೆ ಎನ್ನಲಾಗಿದೆ. ಅವರು ಊರಿನಿಂದ ಬಂದ ಬಳಿಕ ಕಳ್ಳತನದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಕೆಜಿಎಫ್ ಜಿಲ್ಲಾ ರಕ್ಷಣಾಧಿಕಾರಿ ಭಗವಾನ್ ದಾಸ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ರಾಬರ್ಟ್ ಸನ್ ಠಾಣೆ ಪೊಲೀಸರು ಕಳ್ಳರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.