ಕರ್ನಾಟಕ

ಶಿಲ್ಪಾಳ ಉನ್ನತ ಶಿಕ್ಷಣಕ್ಕೆ ಗೌಡರ ನೆರವು

Pinterest LinkedIn Tumblr

Devegouda-JDSS

ಬೆಂಗಳೂರು, ಮೇ 28-ನಗರದ ಆಟೋ ಚಾಲಕರೊಬ್ಬರ ಪುತ್ರಿಯ ಪದವಿ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ರವರ ಹೆಸರಿನಲ್ಲಿ ಬೆಂಗಳೂರು ನಗರ ಯುವ ಜನತಾದಳದ ಅಧ್ಯಕ್ಷ ಹೆಚ್.ಎಂ.ರಮೇಶ್‌ಗೌಡ ರವರು ದತ್ತು ಪಡೆದಿದ್ದಾರೆ.

ದೇವೇಗೌಡರ ಅಮೋಘ ನಿವಾಸದಲ್ಲಿ ಮಹಾಲಕ್ಷ್ಮಿ ಲೇಔಟ್‌ನ ಆಟೋ ಚಾಲಕ ರವಿಕುಮಾರ್ ರವರ ಪುತ್ರಿ ಆರ್.ಶಿಲ್ಪ ರವರನ್ನು ಕರೆಸಿಕೊಂಡು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರವರ ಸಮ್ಮುಖದಲ್ಲಿ ದತ್ತು ಪಡೆಯಲಾಯಿತು.

ಕುಮಾರಿ ಶಿಲ್ಪ ಪಿ.ಯು.ಸಿ. ಯಲ್ಲಿ ಶೇ.73 ಅಂಕ ಗಳಿಸಿದ್ದು, ರಾಜಾಜಿನಗರದ ಕೆ.ಎಲ್.ಇ. ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ., ಪದವಿಗೆ ದಾಖಲಾಗಿದ್ದಾರೆ.  ಪ್ರಥಮ ವರ್ಷದ ಶೈಕ್ಷಣಿಕ ವೆಚ್ಚ 50 ಸಾವಿರ ನಗದನ್ನು ದೇವೇಗೌಡರು ಕುಮಾರಿ ಶಿಲ್ಪಾಗೆ ಹಸ್ತಾಂತರಿಸಿದರು. ಈ ವಿದ್ಯಾರ್ಥಿನಿಯ ಪದವಿ ಶಿಕ್ಷಣದ ಪೂರ್ಣ ವೆಚ್ಚವನ್ನು ರಮೇಶ್‌ಗೌಡ ಭರಿಸಲಿದ್ದಾರೆ.

Write A Comment