ಕರ್ನಾಟಕ

27ಲಕ್ಷ ದೋಚಿದ್ದ ಆಂಧ್ರದ ಮೂವರು ಪೊಲೀಸರ ಸೆರೆ

Pinterest LinkedIn Tumblr

3-arrestdfdd

ಬೆಂಗಳೂರು, ಮೇ 4- ವ್ಯಾಪಾರಿಯೊಬ್ಬರಿಂದ ಆದಾಯ ತೆರಿಗೆ ಅಧಿಕಾರಿಗಳೆಂದು ಹೇಳಿಕೊಂಡು 27 ಲಕ್ಷ ದೋಚಿದ್ದ  ಆಂಧ್ರ ಪೊಲೀಸ್ ಇಲಾಖೆಯ ಮೂವರು ಕಾನ್‌ಸ್ಟೆಬಲ್‌ಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಪ್ರಕರಣವನ್ನು ಬೇಧಿಸಿರುವ ಹಲಸೂರು ಗೇಟ್ ಪೊಲೀಸರು ಸಿವಿಲ್ ಪೇದೆ ಜಯಣ್ಣ (43), ಸಶಸ್ತ್ರ ಮೀಸಲು ಪಡೆಯ ಸತ್ಯನಾರಾಯಣ(40) ಹಾಗೂ ಶೇಖರ್(40) ಎಂಬುವರನ್ನು ಬಂಧಿಸಿ ಆರು ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಒಂದು ವಾಹನ ವಶಕ್ಕೆ ಪಡೆದಿದ್ದಾರೆ.

ಘಟನೆ ಹಿನ್ನೆಲೆ: ಆಂಧ್ರದ ಉದ್ಯಮಿ  ಅಲಿ ಬೇಗ್  ಬಳಿ ಕೆಲಸಕ್ಕಿದ್ದ  ಟಿಪ್ಪು ಎಂಬುವರು  27 ಲಕ್ಷ ರೂ. ಸೂಟ್‌ಕೇಸ್‌ನಲ್ಲಿಟ್ಟು ಕೊಂಡು ಚಿನ್ನಾಭರಣ ಮಳಿಗೆಗೆ ಹೋಗಲು ಮಾ.12ರಂದು ಬೆಂಗಳೂರಿಗೆ ಬಂದಿದ್ದರು. ಮೈಸೂರು ಬ್ಯಾಂಕ್ ವೃತ್ತದ ಬಳಿ ನಡೆದು ಹೋಗುವಾಗ ಎದುರಾದ ಬಂಧಿತ ಮೂವರು ತಾವು ಆದಾಯ ತೆರಿಗೆ ಅಧಿಕಾರಿಗಳು ನಿನ್ನ ಸೂಟ್‌ಕೇಸ್ ಏನಿದೆ ತೋರಿಸಿ ಎಂದು ಹೇಳಿದ್ದಾರೆ.
-ಈ ಸಂಜೆ

Write A Comment