ಕರ್ನಾಟಕ

ಮಿದುಳು ರಕ್ತಸ್ರಾವದಿಂದ ಮೃತಪಟ್ಟ ಯೋಧನಿಗೆ ಅಂತಿಮ ನಮನ

Pinterest LinkedIn Tumblr

yodha

ಹಾಸನ: ಮಿದುಳು ರಕ್ತಸ್ರಾವದಿಂದ ಈಚೆಗೆ ಮೃತಪಟ್ಟ ಜಿಲ್ಲೆಯ ಸಾಲ­ಗಾಮೆ ಗ್ರಾಮದ ಯೋಧ ಮಧು­ಸೂದನ್‌ (35) ಅವರ ಪಾರ್ಥಿವ ಶರೀ­ರದ ಅಂತ್ಯ­ಕ್ರಿಯೆ­ಯನ್ನು ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರ­ವೇ­­ರಿ­ಸಲಾಯಿತು. ಮಧುಸೂದನ್‌ ಅವರು ಕೆಲವು ತಿಂಗಳಿಂದ ಪಂಜಾಬಿನ ಪಠಾಣ್‌­­ಕೋಟ್‌­ನಲ್ಲಿ ಕಾರ್ಯ ನಿರ್ವಹಿಸು­ತ್ತಿ­ದ್ದರು. ಎರಡು ದಿನಗಳ ಹಿಂದೆ ಅವರು ನಿಧನರಾಗಿದ್ದರು.

ಬುಧವಾರ ಬೆಳಿಗ್ಗೆ ಪಾರ್ಥಿವ ಶರೀರ­ವನ್ನು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತರ­ಲಾಯಿತು. ಇಲ್ಲಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್‌, ಪೊಲೀಸ್ ವರಿಷ್ಠಾಧಿ­ಕಾರಿ ರವಿ ಡಿ. ಚನ್ನಣ್ಣನವರ, ಹೆಚ್ಚುವರಿ ಜಿಲ್ಲಾ­ಧಿಕಾರಿ ಡಾ.ಎಚ್.ಎನ್. ಗೋಪಾಲ­­­ಕೃಷ್ಣ, ಪ್ರೊಬೇಷನ್ ಐಎಎಸ್ ಅಧಿಕಾರಿ ವೆಂಕಟ್, ತಹಶೀ­ಲ್ದಾರ್‌ ಮಂಜುನಾಥ್, ಸೈನಿಕ ಕಲ್ಯಾಣ ಇಲಾ­ಖೆಯ ಅಧಿಕಾರಿ ಶಿವಸ್ವಾಮಿ ಹಾಗೂ ಇತರರು ಮೃತದೇಹಕ್ಕೆ ಹೂಗು­ಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು.

ನಂತರ ಪಾರ್ಥಿವ ಶರೀರವನ್ನು ಯೋಧನ ಸ್ವಗ್ರಾಮ ಸಾಲಗಾಮೆಗೆ ಒಯ್ದು ಅಂತ್ಯಕ್ರಿಯೆ ನಡೆಸಲಾಯಿತು. ಸೇನೆಯಲ್ಲಿ 15 ವರ್ಷಗಳ ಸೇವೆ ಸಲ್ಲಿಸಿದ್ದ ಮಧುಸೂದನ್‌ಗೆ ತಂದೆ, ತಾಯಿ, ಪತ್ನಿ ಹಾಗೂ ಸಹೋದರ ಇದ್ದಾರೆ.

Write A Comment