ಕರಾವಳಿ

ಕಣಜದ ಹುಳುಗಳ ದಾಳಿ; ಮಂಗಳೂರಿನ ಯುವಕ ದಾರುಣ ಸಾವು

Pinterest LinkedIn Tumblr

ಮಂಗಳೂರು: ಕಣಜದ ಹುಳು ದಾಳಿ ನಡೆಸಿದ್ದರಿಂದ ಎಂಸಿಎಫ್ ನಲ್ಲಿ ಉದ್ಯೋಗದಲ್ಲಿದ್ದ 24 ವರ್ಷದ ಎಸಿ ಮೆಕ್ಯಾನಿಕ್ ಮೃತಪಟ್ಟ ದಾರುಣ ಘಟನೆ ಬುಧವಾರ ನಡೆದಿದೆ.

ಯಡಪದವು ಪಟ್ಲಚಿಲ್‌ನ ಸದಾಶಿವ ಮತ್ತು ಕಮಲಾಕ್ಷಿ ದಂಪತಿಯ ಪುತ್ರ ಕೇಶವ್ ಅಲಿಯಾಸ್ ಕಿಟ್ಟ(24) ಮೃತ ಯುವಕ.

ಕೇಶವ ಅವರು ಇತ್ತೀಚೆಗೆ ತೆಂಗಿನಕಾಯಿ ಕೀಳಲು ಸಲಕರಣೆಗಳನ್ನು ಖರೀದಿಸಿದ್ದರು. ಅದರ ಸಹಾಯದಿಂದ ನೆರೆಹೊರೆಯವರ ತೆಂಗಿನ ಮರದಿಂದ ತೆಂಗಿನಕಾಯಿ ಕೀಳಲು ಹೋಗಿದ್ದರು. ತೆಂಗಿನ ಮರವನ್ನು ಏರುವಾಗ ಅಕಸ್ಮಾತ್ ಕೇಶವ್ ತಲೆ ಕಣಜದ ಗೂಡಿಗೆ ತಾಗಿದ್ದು ಕಣಜದ ಹುಳುಗಳು ಏಕಾಏಕಿ‌ ಅವರ ಮೇಲೆ ದಾಳಿ ಮಾಡಿವೆ.

ಯುವಕನ ದೇಹದ ಮೇಲೆ ಸುಮಾರು 70ಕ್ಕೂ ಅಧಿಕ ಕಣಜದ ಹುಳುಗಳು ಕಚ್ಚಿವೆ ಎಂದು ಹೇಳಲಾಗಿದೆ. ತಕ್ಷಣವೇ ಅವರನ್ನು ಮೂಡುಬಿದಿರೆಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಕೇಶವ್ ಮೃತಪಟ್ಟಿದ್ದಾರೆ.

 

Comments are closed.