ಕರಾವಳಿ

ಬೈಂದೂರು ತಾರಾಪತಿಯಲ್ಲಿ ನಾಡ ದೋಣಿ ದುರಂತ; ಓರ್ವ ಮೀನುಗಾರನ ಮೃತದೇಹ ಪತ್ತೆ, ಇನ್ನೊಬ್ಬರಿಗೆ ಶೋಧ

Pinterest LinkedIn Tumblr

ಕುಂದಾಪುರ: ದೋಣಿ ಮಗುಚಿ ನಾಪತ್ತೆಯಾಗಿದ್ದ ಮೀನುಗಾರ ಚರಣ್ ಖಾರ್ವಿ (25) ಅವರ ಮೃತದೇಹ ಸಮುದ್ರ ತೀರದ ಅಮ್ಮನವರ ತೋಪ್ಪಲು ಪ್ರದೇಶದಲ್ಲಿ ಸೆಪ್ಟೆಂಬರ್ 18 ಶನಿವಾರ ಪತ್ತೆಯಾಗಿದೆ.

ಬೈಂದೂರು ತಾಲೂಕು ಪಡುವರಿ ಗ್ರಾಮದ ತಾರಪತಿ ಎಂಬಲ್ಲಿ ಮೀನುಗಾರಿಕೆಗೆ ತೆರಳಿ ಮರಳಿ ಅಳ್ವೆಕೋಡಿಗೆ ಬರುತ್ತಿದ್ದ ನಾಡಾದೋಣಿ ಸೆ. 17 ರ ಸಂಜೆ ಮಗುಚಿ ಬಿದ್ದು ದುರಂತ ಸಂಭವಿಸಿತ್ತು. ನಾಪತ್ತೆಯಾದ ಇಬ್ಬರು ಮೀನುಗಾರರಲ್ಲಿ ಚರಣ್ ಅವರು ಒಬ್ಬರಾಗಿದ್ದರು.

ದೋಣಿಯಲ್ಲಿದ್ದ ಇತರೆ ನಾಲ್ಕೈದು‌ ಮೀನುಗಾರರು ಬೇರೆ ನಾಡ ದೋಣಿ ಸಹಾಯದಿಂದ ದಡ ಸೇರಿದ್ದಾರೆ. ದುರಂತ ಸಂಭವಿಸಿದಾಗ ಅವರು ‘ಜೈ ಗುರೂಜಿ’ ದೋಣಿಯಲ್ಲಿ ಕೆಲಸ ಮಾಡುತ್ತಿದ್ದರು.

ಇನ್ನು ನಾಪತ್ತೆಯಾಗಿರುವ ಅಣ್ಣಪ್ಪ ಮೊಗವೀರರ ಪತ್ತೆಗೆ ಹುಡುಕಾಟ ಮುಂದುರಿಸಲಾಗಿದೆ.

Comments are closed.