ಕರಾವಳಿ

3ನೇ ಬಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ: ಕೋಟ to ಮಾರಣಕಟ್ಟೆ ದೇವಸ್ಥಾನಕ್ಕೆ ಅಭಿಮಾನಿಗಳ ಪಾದಯಾತ್ರೆ

Pinterest LinkedIn Tumblr

ಕುಂದಾಪುರ: ಬುಧವಾರ ನಡೆದ ನೂತನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಅಭಿಮಾನಿಗಳು ಹಾಗೂ ಆಪ್ತರು ಕೋಟದಿಂದ ಮಾರಣಕಟ್ಟೆಗೆ ಪಾದಯಾತ್ರೆ ಮಾಡಿದರು.

ಗುರುವಾರದಂದು ಕೋಟ ಶ್ರೀನಿವಾಸ ಪೂಜಾರಿಯವರ ಆಪ್ತ ಸಹಾಯಕರು ಸಹಿತ ಅಭಿಮಾನಿಗಳು ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದಿಂದ ಮುಂಜಾನೆ ಹೊರಟು ಮಾರಣಕಟ್ಟೆ ಶ್ರೀ‌ ಬ್ರಹ್ಮಲಿಂಗೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿ‌ ಶ್ರೀ ದೇವರಿಗೆ ಪೂಜೆ ಸಲ್ಲಿಸಿದರು.

ಕೋಟ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ, ರಂಜಿತ್ ಪೂಜಾರಿ ಮತ್ತು ಕೋಟ ಅಭಿಮಾನಿಗಳು ಈ‌ ಸಂದರ್ಭ ಇದ್ದರು. ನಾವೆಲ್ಲಾ ಕೋಟ ಅಮೃಥೇಶ್ವರಿ ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗ ದೇವಸ್ಥಾನದ ಭಕ್ತರು. ಕೋಟ ಶ್ರೀನಿವಾಸ ಪೂಜಾರಿಯವರು ಕೂಡ ಮುಜರಾಯಿ ಸಚಿವರಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿ ರಾಜ್ಯದಲ್ಲೆ ಸಪ್ತಪದಿ ಮೊದಲಾದ ನೂತನ ವ್ಯವಸ್ಥೆ ಪರಿಚಯಿಸಿದವರು. ದೇವಸ್ಥಾನಗಳಿಗೂ ವಿಶೇಷ ಅನುದಾನ ಸಹಿತ ಪರಿಣಾಮಕಾರಿ ಕ್ರಮಕ್ಕೆ ಮುಂದಾಗಿದ್ದರು. ಮತ್ತೆ ಅವರು ಸಚಿವರಾದರೆ ಅವರ ಊರಿನಿಂದ ಮಾರಣಕಟ್ಟೆ ದೇವಸ್ಥಾನಕ್ಕೆ‌ ಪಾದಯಾತ್ರೆ ಮಾಡಿ ದೇವರಿಗೆ ಪೂಜೆ ಸಲ್ಲಿಸುತ್ತೇವೆಂಬ ಸಂಕಲ್ಪವನ್ನು ಹೊಂದಿದ್ದು ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಈ ಹರಕೆ ಸಮರ್ಪಿಸಿದ್ದೇವೆಂದು ಅವರ ಆಪ್ತ ವಲಯ ತಿಳಿಸಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.