ಕರಾವಳಿ

ಕುಂದಾಪುರದ ಕನ್ನಡಾಭಿಮಾನ ಡಾ| ರಾಜ್ ಸಂಘಟನೆಯಿಂದ ವಿ.ಕೆ. ಮೋಹನ್ ನುಡಿ ನಮನ

Pinterest LinkedIn Tumblr

ಕುಂದಾಪುರ: ಕುಗ್ರಾಮ ವಕ್ವಾಡಿಯಿಂದ ತೆರಳಿ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಬದುಕನ್ನು ಕಟ್ಟಿಕೊಂಡಿದ್ದ ವಿ.ಕೆ ಮೋಹನ್ ಅದೇಷ್ಟೋ ಬಡ ಜನರಿಗೆ ಆಶ್ರಯದಾತರಾಗಿದ್ದರು. ಹಲವಾರು ಸಮಾಜ ಸೇವಾ ಸಂಘಟನೆಗಳ ಪೋಷಕರಾಗಿ ಜನಜನಿತರಾಗಿದ್ದರು. ಸ್ನೇಹಿತರ ಆತ್ಮೀಯರ ಕಷ್ಟ ನಷ್ಟಗಳಿಗೆ ಮಿಡಿಯುವ ಮಾನವತಾವಾದಿಯಾಗಿದ್ದರು. ಓರ್ವ ಆಪ್ತನಾಗಿ ಸುಮಾರು 35ವರ್ಷಕ್ಕೂ ಹೆಚ್ಜಿನ ಕಾಲದ ಒಡನಾಟ ನಮ್ಮದು. ತುಂಬಾ ಅಪರೂಪದ ಉದಾತ್ತ ವ್ಯಕಿತ್ವ ಹೊಂದಿದ ಅವರು ಕರಾವಳಿಯ ಕೊಡಗೈ ದಾನಿಯಾಗಿದ್ದರು. ಅವರಿಲ್ಲದ ಶೂನ್ಯವನ್ನು ತುಂಬಲು ಎಂದಿಗೂ ಅಸಾಧ್ಯ ಅವರ ಆತ್ಮಕ್ಕೆ ಆ ದೇವನು ಸದ್ಗತಿ ಪಾಲಿಸಲೆಂದು ನಾನು ಪ್ರಾರ್ಥಿಸುತ್ತೇನೆ ಎಂದು ಉದ್ಯಮಿ ಮಡಾಮಕ್ಕಿ ಶಶಿಧರ ಶೆಟ್ಟಿ ಅವರು ಹೇಳಿದರು.

ಅವರು ಕನ್ನಡಾಭಿಮಾನ ಡಾ| ರಾಜ್ ಸಂಘಟನೆ ಇವರು ಆಯೋಜಿಸಿದ್ದ ದಿ. ವಿ.ಕೆಮೋಹನ್ ಅವರ ಪ್ರಥಮ ವಾರ್ಷಿಕ ಸ್ಮರಣೆಯ ನುಡಿನಮನ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘಟನೆ ಅಧ್ಯಕ್ಷರಾದ ರತ್ನಾಕರ ಪೂಜಾರಿ ಅವರು ವಿ.ಕೆ ಮೋಹನ್ ಹಾಗೂ ಸಂಘಟನೆ ನಡುವಿನ ಬಾಂಧವ್ಯದ ಕುರಿತು ಹೇಳಿದರು. ಸಭೆಯ ಆರಂಭದಲ್ಲಿ ಸಂಘಟನೆ ಪರವಾಗಿ ಸಲ್ಲಿಸಲಾದ ಶದ್ದಾಂಜಲಿಯನ್ನು ಸುನೀಲ್ ಖಾರ್ವಿ ತಲ್ಲೂರು ವಾಚಿಸಿದರು. ಈ ಸಂದರ್ಭದಲ್ಲಿ ವಿ.ಕೆ ಮೋಹನ್ ಪುತ್ರ ಸಾಗರ್ ಸಹೋದರ ವಿ.ಕೆ ಗೋಪಾಲ್ ಹಾಗೂ ಕುಟುಂಬ ಸದಸ್ಯರು ಭಾಗವಹಿಸಿದ್ದರು.

ಸಭೆಯಲ್ಲಿ ವಿ.ಕೆ ಮೋಹನ್ ಅವರ ಅತ್ಯಾಪ್ತರಾದ ಶ್ರೀಧರ್ ಗಾಣಿಗ, ಹಿರಿಯ ಪತ್ರಕರ್ತ ಮಜರ್ ಕುಂದಾಪುರ, ಪತ್ರಕರ್ತ ಯೋಗೀಶ್ ಕುಂಭಾಸಿ, ಡಾ. ರಾಜ್ ಸಂಘಟನೆಯ ಡುಂಡಿರಾಜ್ ಸಹಿತ ಹಲವರು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಪ್ರಭಾಕರ್, ಸಂಘಟನೆಯ ಅಜೇಂದ್ರ ಶೆಟ್ಟಿ ಕುಡಾಲು, ಅಗಸ್ಟಿನ್, ರಾಮಚಂದ್ರ ಆನಗಳ್ಳಿ, ಹರ್ಷ ಗಂಗೊಳ್ಳಿ, ನವೀನ್ ಪೂಜಾರಿ, ಗಾಳಿ ಸಚಿನ್ ಖಾರ್ವಿ,ನಾಗರಾಜ ಖಾರ್ವಿ, ದಯಾ ನಾಯಕ್, ಕಿಶನ್, ಪ್ರಭಾಕರ್ ಖಾರ್ವಿ, ರಘು ಪೂಜಾರಿ ಕೋಡಿ, ಉದಯ ಶೆಟ್ಟಿ, ಸೂರ್ಯ ದೇವಾಡಿಗ, ಪ್ರಶಾಂತ್ ಶೆಟ್ಟಿ, ರಾಘು ದೇವಾಡಿಗ, ಸತೀಶ್ ಖಾರ್ವಿ, ಅಶೋಕ್ ಪೂಜಾರಿ ಕೋಡಿ ಮೊದಲಾದವರು ಇದ್ದರು.

ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿ, ಸಂಘಟನೆಯ ಅಜೇಂದ್ರ ಶೆಟ್ಟಿಯವರು ವಂದಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.