ಕರಾವಳಿ

ರೈತರ ಹೋರಾಟದಲ್ಲಿ ತುಕ್ಡೆ ಗ್ಯಾಂಗ್ ಸೇರಿಕೊಂಡಿದೆ: ಶೋಭಾ ಕರಂದ್ಲಾಜೆ ಆರೋಪ

Pinterest LinkedIn Tumblr

ಕುಂದಾಪುರ: ರೈತರ ಹೋರಾಟಕ್ಕೆ ರಾಜಕೀಯ ಬಣ್ಣ ಬಂದಿದ್ದರಿಂದ ಹೋರಾಟಕ್ಕೆ ಅಂತ್ಯಸಿಗುತ್ತಿಲ್ಲ. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದ್ದು, ರೈತರ ಹೋರಾಟದ ದಿಕ್ಕುತಪ್ಪಿಸುತ್ತಿದೆ. ಕೇಂದ್ರದಲ್ಲಿ ಅಂದು ಕೃಷಿ ಮಂತ್ರಿಯಾಗಿದ್ದ ಶರತ್ ಪವಾರ್ ಎಪಿ‌ಎಂಸಿ ರದ್ದು ಮಾಡುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದರೆ, ಅಂದು ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಎಪಿ‌ಎಂಸಿ ಕಾಯ್ದೆಯಿಂದ ಹಣ್ಣು ತರಕಾರಿ ತೆಗೆಯಬೇಕು ಎಂದಿದ್ದರು. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸುತ್ತಿರುವುದು ಅಚ್ಚರಿ ಸಂಗತಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಕುಂದಾಪುರ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ದೀರ್ಘಕಾಲ ಕೃಷಿ ಸಚಿವರಾಗಿದ್ದ ಶರತ್ ಪವಾರ್ ಕೃಷಿಯಲ್ಲಿ ಖಾಸಗೀಕರಣ ಬಗ್ಗೆ ಆಸಕ್ತಿ ತೋರಿದ್ದು, ಕಾಂಗ್ರೆಸ್ ಚುನಾವಣೆ ಪ್ರನಾಳಿಕೆಯಲ್ಲಿ ಕೃಷಿಯಲ್ಲಿ ಖಾಸಗೀಕರಣಕ್ಕೆ ಒತ್ತುಕೊಡುತ್ತೇವೆ ಎಂಬ ಭರವಸೆ ನೀಡಿದ್ದರೂ, ಪ್ರಸಕ್ತ ಕೇಂದ್ರ ಸರ್ಕಾರ ತಂದ ಹೊಸ ಕೃಷಿ ನೀತಿಯ ವಿರೋಧಿಸುವ ಹಿಂದಿನ ಉದ್ದೇಶ ಏನು ಎಂದು ಅವರು ಪ್ರಶ್ನಿಸಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ ಕೂಡಾ ದೆಹಲಿಯಲ್ಲಿ ಕೇಂದ್ರದ ಕೃಷಿ ನೀತಿ ಅನುಮೋದಿಸಿದ್ದು, ರಾಜಕೀಯ ಲಾಭಕ್ಕಾಗಿ ಹೋರಾಟದ ಹಿನ್ನೆಲೆಯಲ್ಲಿ ನೂತನ ಕೃಷಿ ನೀತಿ ಪ್ರತಿಗಳ ಹರಿದು ಹಾಕಿದ್ದಾರೆ. ಅಕಾಲಿದಳ ಕೂಡಾ ಎಪಿ‌ಎಂಸಿ ಲಾಭಿಗೆ ಮಣಿದಿದೆ. ಎಪಿ‌ಎಂಸಿಯಲ್ಲಿ ದಲ್ಲಾಳಿಗಳ ಹಾವಳಿ ನಿಯಂತ್ರಣ ಹಾಗೂ ಬೆಂಬಲ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲದ, ರೈತರ ಸ್ವಾಲಂಭಿ ಹಾಗೂ ಅರ್ಥಿಕ ಸದೃಢತೆಗಾಗಿ ನೂತನ ಕಾಯ್ದೆಯಿದ್ದು, ಇದನ್ನು ವಿರೋಧಿಸುವ ಮೂಲಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ರೈತರ ಹೆಸರಲ್ಲಿ ಭಯೋತ್ಪದಕರ ಹಾಗೂ ಖಲಿಸ್ತಾನ ಬೆಂಬಲದ ಸಂಚಿದೆ. ಅರ್ಗಿಕಲ್ಚರ್ ಸ್ಟ್ಯಾಂಡಿಂಗ್ ಕಮಿಟಿಯಲ್ಲಿ ಸದಸ್ಯರಾಗಿದ್ದ ಅಮರೇಂದ್ರ ಸಿಂಗ್, ಕಲಮಲಾಥ್ ಅವರ ಸಲಹೆ ಸೂಚನೆಯಂತೆ ಕೃಷಿ ಕಾಯಿದೆ ಮಂಡನೆಯಾಗಿದ್ದು, ಅವರೇ ಕೃಷಿ ಕಾಯಿದೆ ವಿರೋಧಿಸುತ್ತಿರುವುದು ದರಾದೃಷ್ಟಕರ ಎಂದು ಹೇಳಿದರು.

ರೈತರೇ ಹೋರಾಟ ಮಾಡುತ್ತಿದ್ದರೆ ಸಮಸ್ಯೆ ಬಗೆ ಹರಿಯುತ್ತಿತ್ತು. ಕೇಂದ್ರ ಸರ್ಕಾರ ಹಲವು ಬಾರಿ ರೈತರ ಜೊತೆ ಸಭೆ ನಡೆಸಿದ್ದು, ಇನ್ನೂ ಮಾತುಕತೆಗೆ ಸಿದ್ದವಿರುವುದಾಗಿ ಹೇಳುತ್ತಿರ. ನೂತನ ಕಾಯ್ದೆಯಲ್ಲಿ ಲೋಪದೋಷಗಳಿದ್ದರೆ ತಿದ್ದುಪಡಿಗೂ ಸರ್ಕಾರ ಸಿದ್ದವಿದೆ ಎಂದು ಹೇಳಿದರೂ ರೈತರ ಹೋರಕ್ಕೆ ಬೆಂಬಲ ನೀಡುತ್ತಿರುವವರು ವಿದ್ರೋಹಿ ಹಲವಾರು ಶಕ್ತಿಗಳು, ಅರ್ಬನ್ ನಕ್ಸಲರು, ತುಕ್ಡೇ ಗ್ಯಾಂಗ್ ಇರುವುದರಿಂದ ಹೋರಾಟ ನಿಲ್ಲುತ್ತಿಲ್ಲ. ರೈತ ಪರಹೋರಾಟದಲ್ಲಿ ಭಯೋತ್ಪಾಕರ ಬಿಡುಗಡೆ ಒತ್ತಾಯಿಸಿವ ಕೂಗು ಕೇಳುತ್ತಿರುವುದು ಹೋರಾಟದ ಹಾದಿಗೆ ಹಿಡಿದ ಕನ್ನಡಿ ಎಂದು ಆರೋಪಿಸಿದರು.

ರೈತ ಹೋರಾಟ ಅಜೆಂಡ ದೇಶದ್ರೋಹಿ ಶಕ್ತಿಗಳು ಲೀಡ್ ಮಾಡುತ್ತಿರುವುದು ಆತಂಕಕಾರಿ ವಿಚಾರ. ರಾಜ್ಯದಲ್ಲಿ ಕೂಡಾ ರೈತರ ಹೋರಾಟ ನಡೆದಿದ್ದು, ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಸಿದ್ರಾಮಯ್ಯ ಭಾಷಣ ಮಾಡಿದ್ರು. ರೈತ ಹೋರಾಟ ರೈತ ಹೋರಾಟಕ್ಕೆ ಸೀಮಿತವಾಗಿರದೆ ರಾಜಕೀಯ ಹೋರಾಟವಾಗಿ ಪರಿವರ್ತನೆ ಆಗಿದೆ ಎಂದು ಆರೋಪಿಸಿದರು.

ಮಹಿಳಾ ಮೋರ್ಚಾ ಜಿಲ್ಲಾ ಬಿಜೆಪಿ ಅಧ್ಯಕ್ಷೆ ವೀಣಾ, ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಆಂಕದಕಟ್ಟೆ, ಕುಂದಾಪುರ ಪುರಸಭೆ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಪುರಸಭೆ ಮಾಜಿ ಅಧ್ಯಕ್ಷೆ ಗುಣರತ್ನಾ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಪೈ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಇದ್ದರು.

Comments are closed.