ಕರಾವಳಿ

ಬೆಂಗಳೂರಿನಿಂದ ಸ್ನೇಹಿತರ ಜತೆ ಉಡುಪಿಗೆ ದೇವಸ್ಥಾನಕ್ಕೆಂದು ಬಂದ ವ್ಯಕ್ತಿ ಸಾವು

Pinterest LinkedIn Tumblr

ಉಡುಪಿ: ಬೆಂಗಳೂರಿನಿಂದ ತನ್ನ ಸ್ನೇಹಿತರ ಜೊತೆ ಉಡುಪಿಗೆ ಧಾರ್ಮಿಕ ಕ್ಷೇತ್ರಗಳ ಭೇಟಿಗೆ ಬಂದಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಬೆಂಗಳೂರಿನ ನಿವಾಸಿ ಜಯಸಿಂಹ(62) ಮೃತ ದುರ್ದೈವಿ.

(ಸಾಂದರ್ಭಿಕ ಚಿತ್ರ)

ಬೆಂಗಳುರಿನಿಂದ ಬಿ.ಎಸ್ ಮೋಹನ್ ರಾವ್ ಹಾಗೂ ಸ್ನೇಹಿತರಾದ ಜಯಸಿಂಹ(62), ದೀಪಕ್‌, ಲೋಕೇಶ್‌ರವರೊಂದಿಗೆ ಧಾರ್ಮಿಕ ಕ್ಷೇತ್ರಗಳ ಭೇಟಿಯ ಸಲುವಾಗಿ ಬೆಂಗಳೂರಿನಿಂದ ಉಡುಪಿಗೆ ಬಂದಿದ್ದು, ನ.14ರಂದು ತಾವು ಉಳಿದು ಕೊಂಡಿದ್ದ ಉಡುಪಿಯ ಹೋಟೆಲಿನಿಂದ ಕಾರಿನಲ್ಲಿ ಮಂದಾರ್ತಿಗೆ ತೆರಳುತ್ತಿರುವಾಗ ತೀವ್ರ ಅಸ್ವಸ್ಥಗೊಂಡ ಜಯಸಿಂಹ ಅವರನ್ನು ಕೂಡಲೇ ಚಿಕಿತ್ಸೆಯ ಸಲುವಾಗಿ ಉಡುಪಿಯ ಆಸ್ಪತ್ರೆಗೆ ಕರೆತಂದಿದ್ದು ಅವರನ್ನು ಪರೀಕ್ಷಿಸಿದ ವೈದ್ಯರು ಜಯಸಿಂಹರವರು ಅದಾಗಲೇ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.

ಜಯಸಿಂಹ ಅವರು ಹೃದಯಾಘಾತ ಅಥವಾ ಇತರೇ ಕಾರಣದಿಂದ ಮೃತಪಟ್ಟಿರುವ ಬಗ್ಗೆ ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.