ಕರಾವಳಿ

ಕೋವಿಡ್-19 ವೈರಾಣು ಪುನಃ ಹರಡುತ್ತಿರುವ ಭಯ- ವೃದ್ಧೆ ಆತ್ಮಹತ್ಯೆ

Pinterest LinkedIn Tumblr

ಉಡುಪಿ: ಕೊರೋನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಬಂದಿದ್ದ ವೃದ್ಧೆಯೊಬ್ಬರು ಅದೇ ವಿಚಾರದಲ್ಲಿ ಮಾನಸಿಕವಾಗಿ ನೊಂದು ಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಎಡಬೆಟ್ಟು ನಿವಾಸಿ ವಿಮಲ (78) ಆತ್ಮಹತ್ಯೆಗೆ ಶರಣಾದವರು.

(ಸಾಂದರ್ಭಿಕ ಚಿತ್ರ)

ಘಟನೆ ವಿವರ:
ವಿಮಲಾ ಅವರಿಗೆ ಕೋವಿಡ್ – 19 ವೈರಾಣು ಸೋಂಕು ಬಂದು ಗುಣಮುಖರಾಗಿದ್ದರು. ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ನ.13ರಂದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸಂಜೆ ವಾಪಾಸ್ಸು ಮನೆಗೆ ಕರೆತಂದಿದ್ದರು. ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ವಿಮಲಾ ಅವರು ಕೋವಿಡ್ – 19 ವೈರಾಣು ಖಾಯಿಲೆ ಪುನಃ ಹರಡುತ್ತಿರುವ ಬಗ್ಗೆ ಭಯ ಭೀತರಾಗಿದ್ದು,ಇದೇ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಹತ್ತಿರದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಅವರ ಪುತ್ರ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.