ಕರಾವಳಿ

ಮಗನ ಬೆಲ್ಟ್ ಬಿಗಿದುಕೊಂಡು ನೇಣಿಗೆ ಶರಣಾದ ತಂದೆ…!

Pinterest LinkedIn Tumblr

ಉಡುಪಿ: ಮದ್ಯ ವ್ಯಸನಿ ವ್ಯಕ್ತಿಯೋರ್ವ ತನ್ನ ಮಗನ ಬೆಲ್ಟ್ ಕುತ್ತಿಗೆಗೆ ಬಿಗಿದುಕೊಂಡು ನೇಣಿಗೆ ಶರಣಾದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ತಾಡಿ ಗ್ರಾಮದ ಸಾಯಿಬ್ರಕಟ್ಟೆಯಲ್ಲಿ ನಡೆದಿದೆ.

ಇಲ್ಲಿನ ಜನತಾ ಕಾಲೋನಿ ನಿವಾಸಿ ಶಿವಕುಮಾರ(34) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

(ಸಾಂದರ್ಭಿಕ ಚಿತ್ರ)

ಘಟನೆ ವಿವರ:
ಶಿವಕುಮಾರ ಮದ್ಯಪಾನ ವ್ಯಸನಿಯಾಗಿದ್ದು ಮದ್ಯ ಸೇವಿಸಿ ಮನೆಯಲ್ಲಿಯೇ ಇದ್ದು ಸ್ವಲ್ಪ ಮೌನಿಯಾಗಿದ್ದರು. ಯಾವುದೋ ಕ್ಷುಲ್ಲಕ ಕಾರಣದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನ.13 ರಂದು ಮಧ್ಯಾಹ್ನ ತನ್ನ ವಾಸದ ಮನೆ ಕೋಣೆಯ ಕಿಟಕಿ ಸರಳಿಗೆ ತನ್ನ ಮಗನ ಬೆಲ್ಟನ್ನು ಬಿಗಿದು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಶಿವಕುಮಾರ್ ಪತ್ನಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.