ಕರಾವಳಿ

ಜಮೀನು ವಿಚಾರದಲ್ಲಿ ವಂಚಿಸಿದ ಆರೋಪಿಗೆ ಶಿಕ್ಷೆ ನೀಡಿದ ಉಡುಪಿ ಕೋರ್ಟ್

Pinterest LinkedIn Tumblr

ಉಡುಪಿ: ಆರೋಪಿಯಾದ ಥಾಮಸ್ ರಾಡ್ರಿಗಸ್ ತಂದೆ ಪೌಲ್ ರಾಡ್ರಿಗಸ್ ಮರಿಯ ನಿಲಯ ಗಾಳಿತೋಡು ಉಡುಪಿ ಈತನು ತನ್ನ ಉಡುಪಿಯ ಐರೋಡಿ ಗ್ರಾಮದ ಸರ್ವೇನಂ. 38/7ರ 0.20 ಎಕರೆ ಜಮೀನು ಹಾಗೂ ಮನೆಯನ್ನು ಉಡುಪಿಯ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ ಆಧಾರ ನೀಡಿ ರೂ. 30,000/- ಸಾಲ ಪಡೆದು ಅದೇ ಜಮೀನನ್ನು ಜೊನ್ನಾ ರಾಲ್ಪ್‍ಡೆಸಾ ಐರೋಡಿ ಅವರಿಗೆ ಜಮೀನಿನ ಮೇಲೆ ಯಾವುದೇ ಋಣ ಭಾರವಿಲ್ಲವೆಂದು ಸುಳ್ಳು ದಾಖಲೆ ತೋರಿಸಿ 7 ಲಕ್ಷ ರೂ. ಮೊತ್ತ ಪಡೆದು ಬ್ರಹ್ಮಾವರ ಸಬ್ ರಿಜಿಸ್ಟರ್ ಕಛೇರಿಯಲ್ಲಿ ನೊಂದಣಿ ಮಾಡಿ ಮಾರಾಟ ಮಾಡಿ ಮೋಸ ಮಾಡಿರುತ್ತಾರೆ ಎಂದು ಜೊನ್ನಾ ಅವರು ಬ್ರಹ್ಮಾವರ ಠಾಣೆಯಲ್ಲಿ ದೂರನ್ನು ದಾಖಲಿಸಿರುತ್ತಾರೆ.

ಈ ಪ್ರಕರಣದ ತನಿಖೆಯನ್ನು ಆಗಿನ ಸಬ್ ಇನ್ಸ್‍ಪೆಕ್ಟರ್ ಬಿ.ಎಸ್ ಶ್ರೀನಿವಾಸ್ ರಾಜ್ ಮತ್ತು ಹೊಸಕೇರಪ್ಪ ಕೆ ರವರು ತನಿಖೆ ನಡೆಸಿ ದೊಷಾರೋಪಣೆ ಪಟ್ಟಿಯನ್ನು ಸಲ್ಲಿಸಿರುತ್ತಾರೆ.

ಈ ಪ್ರಕರಣವು ಉಡುಪಿ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುದ್ದ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಮಂಜುನಾಥ್ ಎಂ.ಎಸ್ ಆರೋಪಿಗೆ ಭಾ.ದಂ.ಸಂ ಕಲಂ 420, 423 ರಡಿ 1 ವರ್ಷ 2 ತಿಂಗಳು ಸಾದಾ ಸಜೆ ಮತ್ತು 2,000 ರೂ. ದಂಡ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಮ್ತಾಜ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Comments are closed.