ಓಡಿಶಾ: ತೀವೃ ಅನಾರೋಗ್ಯದಿಂದ ಬಳಲಿ ಭಾನುವಾರದಂದು ಕೃಷ್ಣೈಕ್ಯರಾದ ಪೇಜಾವರ ಶ್ರೀ ವಿಶ್ವೇಶತೀರ್ಥರ ಮರಳು ಶಿಲ್ಪ ರಚಿಸುವ ಮೂಲಕ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಎನ್ನುವವರು ನಮನ ಸಲ್ಲಿಸಿದ್ದಾರೆ.
ಒಡಿಶಾದ ಪುರಿಯ ಬೀಚ್ನಲ್ಲಿ ಮರಳಿನಲ್ಲಿ ಪೇಜಾವರ ಶ್ರೀಗಳ ಸುಂದರ ಕಲಾಕೃತಿಯನ್ನು ಮೂಡಿಸುವ ಮೂಲಕ ಗೌರವ ಸಮರ್ಪಿಸಿದ್ದಾರೆ.
ಈ ಬಗ್ಗೆ ಸುದರ್ಶನ್ ಪಟ್ನಾಯಕ್ ಅವರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿಕೊಂಡಿದ್ದು, ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರಿಗೆ ನನ್ನ ಮರಳು ಶಿಲ್ಪದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
Comments are closed.