ಕರಾವಳಿ

‘ಪೇಜಾವರ ಅಜರಾಮರ’- ಓಡಿಶಾ ಸಮುದ್ರ ಕಿನಾರೆಯಲ್ಲಿ ಶ್ರೀಗಳ ಮರಳುಶಿಲ್ಪ ರಚಿಸಿ ನಮನ

Pinterest LinkedIn Tumblr

ಓಡಿಶಾ: ತೀವೃ ಅನಾರೋಗ್ಯದಿಂದ ಬಳಲಿ ಭಾನುವಾರದಂದು ಕೃಷ್ಣೈಕ್ಯರಾದ ಪೇಜಾವರ ಶ್ರೀ ವಿಶ್ವೇಶತೀರ್ಥರ ಮರಳು ಶಿಲ್ಪ ರಚಿಸುವ ಮೂಲಕ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್‌ ಎನ್ನುವವರು ನಮನ ಸಲ್ಲಿಸಿದ್ದಾರೆ.

ಒಡಿಶಾದ ಪುರಿಯ ಬೀಚ್​ನಲ್ಲಿ ಮರಳಿನಲ್ಲಿ ಪೇಜಾವರ ಶ್ರೀಗಳ ಸುಂದರ ಕಲಾಕೃತಿಯನ್ನು ಮೂಡಿಸುವ ಮೂಲಕ ಗೌರವ ಸಮರ್ಪಿಸಿದ್ದಾರೆ.

ಈ ಬಗ್ಗೆ ಸುದರ್ಶನ್​ ಪಟ್ನಾಯಕ್​ ಅವರು ತಮ್ಮ ಟ್ವಿಟರ್ ಅಕೌಂಟ್​ನಲ್ಲಿ ಫೋಟೋಗಳನ್ನು ಪೋಸ್ಟ್​ ಮಾಡಿಕೊಂಡಿದ್ದು, ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರಿಗೆ ನನ್ನ ಮರಳು ಶಿಲ್ಪದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

Comments are closed.