ಕರಾವಳಿ

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ : ಮಂಗಳೂರಿನ ಮನುಸ್ಮಿತ ಅವರಿಗೆ 2 ಚಿನ್ನದ ಪದಕ

Pinterest LinkedIn Tumblr

ಮಂಗಳೂರು : ಮಂಗಳೂರಿನ ಪಂಪ್‍ವೆಲ್‌ನಲ್ಲಿರುವ ಫಾದರ್ ಮುಲ್ಲರ್ ಒಳಾಂಗಣ ಕ್ರೀಂಡಾಗಣದಲ್ಲಿ ಜರಗಿದ 37ನೇ ಬುಡೋಕಾನ್ ಕರಾಟೆ ರಾಷ್ಟೀಯ ಮಟ್ಟದ ಚಾಂಪಿಯನ್ ಶಿಪ್ 2019ರಲ್ಲಿ ಉರ್ವ ಕೆನರಾ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿನಿ ಮನುಸ್ಮಿತ ಅವರು ಬಿಳಿಪಟ್ಟಿಯ (white belt) 9 ರಿಂದ 12 ವರ್ಷ ವಯೋಮಿತಿ ವೈಯಕ್ತಿಕ ಕಟ ವಿಭಾಗದಲ್ಲಿ ಚಿನ್ನದ ಪದಕ ಮತ್ತು 45 ಕೆ.ಜಿ ಮೇಲ್ಪಟ್ಟ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.

ಮಂಗಳೂರಿನ ಬಿಜೈ ಬಾಳಿಗಾಸ್ಟೋರ್ ಸಮೀಪದ ನಿವಾಸಿ ಶ್ರೀ ಯಶ್‌ರಾಜ್ ಟಿ್.ಎಚ್ ಮತ್ತು ಶ್ರೀಮತಿ ಪುಷ್ಪಾ ದಂಪತಿಗಳ ಪುತ್ರಿಯಾಗಿರುವ ಇವರು ರೀನಾ ಮತ್ತು ರಂಜಿತ ಪೂಜಾರಿ ಅವರಿಂದ ಕರಾಟೆ ತರಬೇತಿಯನ್ನು ಪಡೆಯುತ್ತಿದ್ದಾರೆ.

Comments are closed.