ಕರಾವಳಿ

ಕುಂದಾಪುರ ಪುರಸಭೆಗೆ ಉಡುಪಿ ಡಿಸಿ ದಿಡೀರ್ ಭೇಟಿ ನೀಡಿದ್ದ್ಯಾಕೆ?

Pinterest LinkedIn Tumblr

ಕುಂದಾಪುರ: ಇಲ್ಲಿನ ಪುರಸಭೆಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಸೋಮವಾರದಂದು ದಿಢೀರ್ ಭೇಟಿ ನೀಡಿದರು. ಸಕಾಲ ಅಡಿಯಲ್ಲಿ ನೀಡುವ ಅರ್ಜಿ ವಿಲೇವರಿ ಮಾಡುವಲ್ಲಿ ವಿಳಂಬ ದೋರಣೆ ತೋರುವ ಬಗ್ಗೆ ಸಾರ್ವಜಿನಿಕರ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆನ್ನಲಾಗಿದೆ.

ಜಿಲ್ಲಾಧಿಕಾರಿಗಳು ನಿರ್ವಾಹಕರು, ಕಂದಾಯ ನಿರೀಕ್ಷಕರ ಕುರ್ಚಿಯಲ್ಲಿ ಕುಳಿತು ಬಾಕಿ ಇರುವ ಅರ್ಜಿಗಳ ಪರಿಶೀಲನೆ ನಡೆಸಿದರು. ಸಕಾಲ ಅಡಿಯಲ್ಲಿ ಅರ್ಜಿ ಪಡೆಯುವ ಬಗ್ಗೆ ಖುದ್ದು ತಪಾಸಣೆ ನಡೆಸಿ , ಸಾರ್ವಜನಿಕರಿಗೆ ತ್ವರಿತವಾಗಿ ಸೇವೆ ಒದಗಿಸುವಂತೆ ಸೂಚಿಸಿದರು .

ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮೊದಲಾದವರು ಇದ್ದರು.

Comments are closed.