ಉಡುಪಿ: ಕ.ರಾ.ರ.ಸಾ.ನಿಗಮವು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಕೇಂದ್ರೀಯ ವಿಭಾಗದಿಂದ ಬೆಂಗಳೂರು-ಕುಂದಾಪುರ ವಯಾ ಮಂಗಳೂರು-ಉಡುಪಿ-ಕುಂದಾಪುರ-ಮಣಿಪಾಲ ಮಾರ್ಗದಲ್ಲಿ ಈಗಾಗಲೇ ಐರಾವತ ಕ್ಲಬ್ಕ್ಲಾಸ್ ಮಲ್ಟಿಆಕ್ಸಲ್ ಸಾರಿಗೆಯನ್ನು ಕರ್ಯಾಚರಣೆಗೊಳಿಸಲಾಗುತ್ತಿದ್ದು, ಪ್ರಸ್ತುತ ಸದರಿ ಸಾರಿಗೆಯನ್ನು ಮೇಲ್ದರ್ಜೆಗೇರಿಸಿ, ಅಂಬಾರಿ ಡ್ರೀಮ್ಕ್ಲಾಸ್ ಮಲ್ಟಿ ಅಕ್ಸಲ್ ಎ.ಸಿ. ಸ್ಲೀಪರ್ ಸಾರಿಗೆಯನ್ನಾಗಿ ಕರ್ಯಾಚರಣೆ ಮಾಡಲಾಗುತ್ತಿದೆ.
(ಸಾಂದರ್ಭಿಕ ಚಿತ್ರ)
ಈ ಸಾರಿಗೆಯು ಬೆಂಗಳೂರಿನಿಂದ ರಾತ್ರಿ 10.10 ಕ್ಕೆ ಹೊರಟು ವಯಾ ಸಕಲೇಶಪುರ-ಹಾಸನ-ಮಂಗಳೂರು-ಉಡುಪಿ, ಮಣಿಪಾಲ ಮಾರ್ಗವಾಗಿ ಕುಂದಾಪುರಕ್ಕೆ ಬೆಳಗ್ಗೆ 7.30 ಕ್ಕೆ ತಲುಪುತ್ತದೆ ಹಾಗೂ ಮರು ಪ್ರಯಾಣದಲ್ಲಿ ಕುಂದಾಪುರದಿಂದ ರಾತ್ರಿ 8.45 ಕ್ಕೆ ಹೊರಟು ಮಣಿಪಾಲ-ಉಡುಪಿ-ಮಂಗಳೂರು ಉಪ್ಪಿನಂಗಡಿ ಸಕಲೇಶಪುರ, ಹಾಸನ ಮಾರ್ಗವಾಗಿ ಬೆಂಗಳೂರಿಗೆ ಬೆಳಗ್ಗೆ 6ಗಂಟೆಗೆ ತಲುಪುತ್ತದೆ.
ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರ 1000 ರೂ. ನ್ನು ಆಕರಿಸಿ ಸಾರಿಗೆ ಕಾರ್ಯಾಚರಣೆ ಮಾಡಲಾಗುತ್ತಿದೆ. ಸದರಿ ಸಾರಿಗೆಗೆ www.ksrtc.in ನಲ್ಲಿ ಅವತಾರ್ ಹಾಗೂ ನಿಗಮದ ಖಾಸಗಿ ಬುಕ್ಕಿಂಗ್ ಕೌಂಟರ್ಗಳಲ್ಲಿ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಸದರಿ ಸಾರಿಗೆಯ ಸದುಪಯೋಗ ಪಡೆದುಕೊಳ್ಳುವಂತೆ ಮಂಗಳೂರು ಕ.ರಾ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.