ಉಡುಪಿ: ಸಮುದ್ರ ಕಿನಾರೆಯಲ್ಲಿ ನಿಲ್ಲಿಸಿದ್ದ ದೋಣಿಯು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿಯಲ್ಲಿದ್ದ ಬಲೆ ಮತ್ತು ಇಂಜಿನ್ಗೆ ಹಾನಿಯಾದ ಘಟನೆ ಗುಜ್ಜಾಡಿ ಗ್ರಾಮದ ಬೆಣ್ಗೆರೆ ಎಂಬಲ್ಲಿ ನಡೆದಿದೆ.
ಬೆಣ್ಗೆರೆ ನಿವಾಸಿ ಸಂತೋಷ ಖಾರ್ವಿ ಎಂಬುವರು ಮೀನುಗಾರಿಕಾ ದೋಣಿಯನ್ನು ಬೆಣ್ಗೆರೆ ಕಡಲ ಕಿನಾರೆಯಲ್ಲಿ ನಿಲ್ಲಿಸಿದ್ದು, ಬೆಳಿಗ್ಗೆ ಚಂಡಮಾರುತದ ಪರಿಣಾಮವಾಗಿ ಸಮುದ್ರದಲ್ಲಿ ಎದ್ದ ವಿಪರೀತ ಅಲೆಗಳ ರಭಸಕ್ಕೆ ದೋಣಿಯಲ್ಲಿದ್ದ ಬಲೆ ಹಾಗೂ ದೋಣಿಗೆ ಅಳವಡಿಸಿದ ಇಂಜಿನ್ ಸಮುದ್ರದ ಅಲೆಗೆ ಕೊಚ್ಚಿಕೊಂಡು ಹೋಗಿದೆ. ಇಂಜಿನ್ ಸಮುದ್ರದ ನೀರಿನಲ್ಲಿ ಮುಳುಗಿ ಹಾನಿಯಾಗಿದ್ದು, ಬಲೆ ಸಂಪೂರ್ಣವಾಗಿ ಹರಿದು ಹೋಗಿದೆ. ಇದರಿಂದ ಸುಮಾರು ೨.೫ ಲಕ್ಷ ರೂ. ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
Comments are closed.