ಕರಾವಳಿ

ಬಿಯರ್ ಬಾಟಲ್ ಒಡೆದು ಕೊಲೆಗೆ ಯತ್ನ; ಪ್ರಕರಣ ದಾಖಲು

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಬಾರೊಂದರ ಬಳಿ ನವನಗರದ ನಿವಾಸಿ ನಿಸಾರ್ ಎಂಬಾತನು ಹಣಕಾಸಿನ ವ್ಯವಹಾರದ ವಿಚಾರದಲ್ಲಿ ವೈಮನಸ್ಸಿನಿಂದ ಲವಕರ ಎಂಬುವವರನ್ನು ಕೊಲೆ ಮಾಡುವ ಉದ್ದೇಶದಿಂದ ಬಿಯರ್ ಬಾಟ್ಲಿಯನ್ನು ಒಡೆದು ಅದರಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಸಾಂದರ್ಭಿಕ ಚಿತ್ರ)

ಲವಕರನ ಮುಖ, ಹಣೆ, ಕಿವಿ, ತಲೆ ಭಾಗಕ್ಕೆ ತಿವಿದು ಕೊಲೆಗೆ ಪ್ರಯತ್ನಿಸಿದ್ದು ಘಟನೆಯು ಬಾರ್‌ನ ನಿಯಂತ್ರಣಕ್ಕೊಳಪಟ್ಟಿರುವ ಆವರಣದಲ್ಲಿ ನಡೆದಿದ್ದರೂ, ಈ ಸಮಯ ಸ್ಥಳದಲ್ಲಿ ಹಾಜರಿದ್ದ ಸಂಬಂಧಿಸಿದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲು ವಿಫಲರಾಗಿದ್ದ ಹಿನ್ನೆಲೆ ಆರೋಪಿಗಳ ವಿರುದ್ಧ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಗಾಯಾಳುವಿನ ಬಾವ ರಾಘವೇಂದ್ರ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.