ಕರಾವಳಿ

ಹಳೆ ದ್ವೇಷದಿಂದ ಇಬ್ಬರಿಗೆ ಕೋಳಿ ಕತ್ತಿಯಿದ ಇರಿತ : ಇಬ್ಬರ ಬಂಧನ, ಓರ್ವ ಪರಾರಿ

Pinterest LinkedIn Tumblr

ಕುಂದಾಪುರ: ನೇರಳಕಟ್ಟೆ ಬಾರ್‌ನಲ್ಲಿ ಶನಿವಾರ ರಾತ್ರಿ ಊಟ ಮುಗಿಸಿ ಹೋಗುತ್ತಿದ್ದ ಇಬ್ಬರ ಮೇಲೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೋಳಿ ಕತ್ತಿಯಿಂದ ತಿವಿದಿದ್ದು ಇಬ್ಬರು ಗಂಭೀರ ಗಾಯಗೊಂಡು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರ್ಕುಂಜೆ ಗ್ರಾಮ ನೇರಳಕಟ್ಟೆ ನಿವಾಸಿ ಸಂತೋಷ ಶೆಟ್ಟಿ (38) ಹಾಗೂ ಅವರ ಸಂಬಂಧಿಕ ಕುಂದಾಪುರ ರವಿರಾಜ ಶೆಟ್ಟಿ ಗಂಭೀರ ಗಾಯಗೊಂಡವರು. ನೇರಳಕಟ್ಟೆಯ ಹರೀಶ ಶೆಟ್ಟಿ, ಸ್ವರಾಜ್, ಅಭಿ ಯಾನೆ ಅವಿನಾಶ್, ಅಚ್ಚು ಯಾನೆ ಅಶ್ವಿನ್ ಆಪಾದಿತರು.

ನೇರಳಕಟ್ಟೆ ಬಾರ್ ಒಂದರಲ್ಲಿ ಊಟಮಾಡಿ ಬರುತ್ತಿದ್ದ ಇಬ್ಬರನ್ನು ರಿಟ್ಜ್ ಕಾರ್ ಹಾಗೂ ಮೋಟಾರು ಸೈಕಲ್‌ನಲ್ಲಿ ಬಂದ ಆಪಾದಿತರು ಬೈಕ್ ಅಡ್ಡಗಟ್ಟಿ, ಸಂತೋಷ ಹಾಗೂ ರವಿರಾಜ ಎಂಬವರಿಗೆ ಕೊಳಿ ಕತ್ತಿಯಿಂದ ಎದೆ ಮತ್ತು ಹೊಟ್ಟೆಗೆ ತಿವಿದಿದ್ದು, ಗಾಯಾಳುಗಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಳೇ ಪ್ರಕರಣವೊಂದರಲ್ಲಿ ಭಾಸ್ಕರ ಶೆಟ್ಟಿ ಎಂಬವರಿಗೆ ಗಾಯಗೊಂಡ ವ್ಯಕ್ತಿಗಳು ಪೊಲೀಸ್ ಕಂಪ್ಲೇಂಟ್ ಕೊಡಲು ಸಹಕಾರ ನೀಡಿದ್ದಾರೆ ಎನ್ನುವ ಉದ್ದೇಶವೇ ಹಲ್ಲೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಎಸಿ ನಿಶಾ ಜೇಮ್ಸ್, ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್ ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಭೇಟಿ ನೀಡಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.