ಕರಾವಳಿ

ಆಯುಷ್ ಫೆಡರೇಶನ್‌ನಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

Pinterest LinkedIn Tumblr

ಮಂಗಳೂರು: ಆಯುಷ್ ಫೆಡರೇಶನ್ ಆಫ್ ಇಂಡಿಯಾ ದ.ಕ. ಮಂಗಳೂರು ಶಾಖೆಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಡಾ.ವಿವೇಕಾನಂದ ಪ್ರಭು ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್ ಕಾರ್ಯಕ್ರಮ ಉದ್ಘಾಟಿದರು. ಎ.ಎಫ಼್.ಐ. ಮಂಗಳೂರು ಘಟಕ ದ ಅಧ್ಯಕ್ಷ ಡಾ.ಕೃಷ್ಣ. ಎಮ್.ಗೋಖಲೆ ಎ.ಎಫ್ ಐ ಸಂಸ್ಥೆಗೆ ಬಗ್ಗೆ ಮಾಹಿತಿ ನೀಡಿದರು.

ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಹಿರಿಯ ವೈದ್ಯ ಡಾ. ಶ್ರೀಪತಿ ಕಿನ್ನಿಗಂಬಳ ಮತ್ತು ಎ.ಎಫ಼್.ಐ.ಸ್ಥಾಪಕಾಧ್ಯಕ್ಷ ಡಾ.ಕೃಷ್ಣರಾಜ ಭಟ್ ರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್, ಸಂಪನ್ಮೂಲ ವ್ಯಕ್ತಿ ಡಾ.ಮುರಲೀಧರ ಶರ್ಮ, ಮಂಗಳೂರು ಎ.ಎಫ್.ಐ .ಘಟಕ ದ ಕಾರ್ಯದರ್ಶಿ ಡಾ.ಸುಧೀಂದ್ರ ರಾವ್ ಮುಖ್ಯ ಅತಿಥಿಗಳಾಗಿ‌ ಭಾಗವಹಿಸಿದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷ ರಾಗಿ ಆಯ್ಕೆಯಾದ ಕಾರ್ಕಳ ಡಾ.ಜಗದೀಶ ಪೈ ಕಾರ್ಕಳರವರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಎ.ಏಫ಼್.ಐ.ದ.ಕ. ಅಧ್ಯಕ್ಷ ರಾದ ಡಾ.ನಾರಾಯಣ ಅಸ್ರ ಸ್ವಾಗತಿಸಿದರು . ಪುತ್ತೂರಿನ ಡಾ.ಶಶಿಧರ ಕಜೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಎ.ಎಫ಼್.ಐ.ಕಾರ್ಯದರ್ಶಿ ಡಾ.ಶ್ರೀದೇವಿ ಭಟ್ ವಂದಿಸಿದರು.

Comments are closed.