ಕರಾವಳಿ

ಕುಂದಾಪ್ರ ಕನ್ನಡ ಬಳಗ ಗಲ್ಪ್-ಬೈಂದೂರಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನ; ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Pinterest LinkedIn Tumblr

ಕುಂದಾಪುರ: ಭಾಷೆ ಅನ್ನೋದು ಕೇವಲ ಸಂವಹನದ ವೇದಿಕೆಯಲ್ಲ.ಬದಲಾಗಿ ನಮ್ಮ ಬದುಕು ಈ ನೆಲದ ಪರಂಪರೆಯ ಪ್ರತೀಕ. ಕುಂದಾಪ್ರ ಭಾಷೆ ತನ್ನದೇ ಆದ ಹಿರಿಮೆ ಹೊಂದಿದೆ.ಇಲ್ಲಿನ ಸಾಧಕರು ಪ್ರಪಂಚದೆಲ್ಲೆಡೆ ಊರಿನ ಹೆಸರನ್ನು ಬೆಳೆಸಿದ್ದಾರೆ.ಮೊಗೇರಿ ಅಡಿಗರು,ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸೇರಿದಂತೆ.ಕಲೆ, ಸಾಹಿತ್ಯ ಶಿಕ್ಷಣ, ಉದ್ಯಮ, ಕ್ರೀಡೆ,ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲೂ ಕುಂದಾಪುರದ ಕೊಡುಗೆ ಅಪಾರ.ನಮ್ಮ ಭಾಷೆ ನಮ್ಮ ಬದುಕಿನ ಸಂಕೇತ.ಅದು ಮುಂದಿನ ತಲೆಮಾರಿಗೆ ತಲುಪಿಸಬೇಕು ಎಂದು ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

ಅವರು ಬೈಂದೂರು ಹೋಟೆಲ್ ಅಂಬಿಕಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆದ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ವಿಶ್ವ ಕುಂದಾಪ್ರ ದಿನಾಚರಣೆಯ ಪ್ರಯುಕ್ತ ಹ್ವಾಯ್ ಬನಿ ಕೂಕಣಿ -ಸ್ನೇಹ ಸಮ್ಮೀಲನ-2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ವಿದೇಶದಲ್ಲಿರುವ ಕುಂದಾಪ್ರ ಕನ್ನಡಿಗರ ಆಸರೆಯ ಕೊಂಡಿಯಾಗಿದೆ.ಅಲ್ಲಿನ ಉದ್ಯಮಿಗಳು ಊರಿನ ಅಭಿವೃದ್ದಿ ಬಗ್ಗೆ ತೋರಿಸುವ ಕಾಳಜಿ ಮೆಚ್ಚುವಂತದ್ದು ನಮ್ಮ ಭಾಷೆಗೆ ಸರಕಾರದಿಂದ ಸಿಗುವ ಪ್ರಾದಾನ್ಯತೆಯನ್ನು ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ಅಧ್ಯಕ್ಷ ಸಾಧನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಜಾದೂಗಾರ ಓಂ ಗಣೇಶ ಉಪ್ಪುಂದ, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಜನಾರ್ಧನ ಮರವಂತೆ,ರಾಷ್ಟ್ರಪ್ರಶಸ್ತಿ ವಿಜೇತ,ಚಲನಚಿತ್ರ ನಿರ್ಮಾಪಕ ಎಸ್.ನಿತ್ಯಾನಂದ ಪೈ,ಮಾಜಿ ಜಿ.ಪಂ ಅಧ್ಯಕ್ಷ ಎಸ್.ರಾಜು ಪೂಜಾರಿ,ತಾ.ಪಂ ಸದಸ್ಯ ರಾಜು ದೇವಾಡಿಗ ತ್ರಾಸಿ, ಶೀನ ದೇವಾಡಿಗ ದುಬೈ ಉದ್ಯಮಿಗಳಾದ ಪ್ರಕಾಶ್ ಬೊರೋಟ್ಟೋ , ರಿಯಾಜ್ ಅಹ್ಮದ್, ಉದ್ಯಮಿ ಜಯಾನಂದ ಹೋಬಳಿದಾರ್,ರಿಚರ್ಡ್ ರೆಬೆಲ್ಲೋ,ಸ.ಪ್ರ.ದ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಲತಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಹೋರಾಟ ಸಮಿತಿ ಅಧ್ಯಕ್ಷರು ಹಿರಿಯರಾದ ರೋ.ಜಗನ್ನಾಥ ಶೆಟ್ಟಿಯವರನ್ನು ಸಮ್ಮಾನಿಸಲಾಯಿತು ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ,ದತ್ತು ಸ್ವೀಕಾರ,ಕುಂದಾಪ್ರ ಕನ್ನಡ ಹರಟೆ ಹಾಗೂ ಕುಂದಾಪ್ರ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.

ಬಹ್ರೈನ್ ಕನ್ನಡ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಧನದಾಸ್ ಸಮ್ಮಾನ ಪತ್ರ ವಾಚಿಸಿದರು.ಸುಬ್ರಹ್ಮಣ್ಯ ಹೆಬ್ಬಾಗಿಲು ಸ್ವಾಗತಿಸಿದರು .ಪತ್ರಕರ್ತ ಅರುಣ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Comments are closed.