ಕರಾವಳಿ

ಕುಂದಾಪುರದ ಹೆಮ್ಮಾಡಿಯಲ್ಲಿ ಬೊಲೆರೋ ಡಿಕ್ಕಿಯಾಗಿ ಪಾದಾಚಾರಿ ಸಾವು

Pinterest LinkedIn Tumblr

ಕುಂದಾಪುರ: ಬೊಲೆರೋ ವಾಹನವೊಂದು ಡಿಕ್ಕಿಯಾಗಿ ಪಾದಾಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕುಂದಾಪುರ ತಅಲೂಕಿನ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಹೆಮ್ಮಾಡಿಯ ಬುಗ್ರಿಕಡು ನಿವಾಸಿ ಕುಷ್ಟ ಯಾನೆ ಕೃಷ್ಣ ಪೂಜಾರಿ (51) ಅಪಘಾತದಲ್ಲಿ ಮ್ರತ ಪಾದಾಚಾರಿ.

ಕೃಷ್ಣ ಪೂಜಾರಿ ರಸ್ತೆ ಸಮೀಪ ನಡೆದು ಸಾಗುತ್ತಿದ್ದಾಗ ವೇಗವಾಗಿ ಬಂದ ಬೊಲೆರೋ ವಾಹನವು ಅವರಿಗೆ ಡಿಕ್ಕಿ ಹೊಡೆದಿದ್ದು ಅಪಘಾತದ ಬಳಿಕ ಪರಾರಿಯಾಗಲು ಯತ್ನಿಸಿತ್ತು. ಆದರೆ ಸ್ಥಳೀಯರು ಅದನ್ನು ಹಿಂಬಾಲಿಸಿ ತ್ರಾಸಿ ಸಮೀಪ ಅಡ್ಡಗಟ್ಟಿ ಹಿಡಿದಿದ್ದಾರೆ/

ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.