ಕರಾವಳಿ

ಮಂಗಳೂರಿನ ಮರ್ಕರ ಹಿಲ್ ರಸ್ತೆ : ಇಂಟರ್‌ಲಾಕ್ ಕಾಮಗಾರಿಗೆ ಗುದ್ದಲಿ ಪೂಜೆ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಸೂಚನೆಯಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮರ್ಕರ ಹಿಲ್ ರಸ್ತೆ ಕಾಮಗಾರಿಗೆ ಮುಖ್ಯ ರಸ್ತೆಯಿಂದ ಒಳರಸ್ತೆ- ಕಿಶೋರ್ ವರ್ತಕ ಮನೆವರೆಗಿನ ಮಣ್ಣಿನ ರಸ್ತೆಗೆ ಇಂಟರ್ ಲಾಕ್ ಅಳವಡಿಸುವ ಕಾಮಗಾರಿಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ದ.ಕ. ಪ್ರದೇಶ ಪರಿಷತ್ ಅಧ್ಯಕ್ಷ ರೆ.ವೆ.ಪ್ರಭುರಾಜ್, ಸುಶಾಂತಿ ದೇವಾಲಯ ಸಭಾಪಾಲಕರಾದ ರೆ.ವೆ.ಪ್ರವೀಣ್ ಮಾಬೆನ್, ಸ್ಥಳೀಯ ಪ್ರಮುಖರಾದ ಜೇಮ್ಸ್ ಪ್ರವೀಣ್ ಕುಮಾರ್, ಹ್ಯಾಂಡ್ಲಿ ಸೈಮನ್, ಕಿರಣ್ ಜೇಮ್ಸ್, ಸುನೀಲ್ ಸೋನ್ಸ್, ಸಂತೋಷ್ ಕುಂದರ್, ಅರ್ಚಿ ಬೋಲ್ಡ್ ಡಿಸೋಜಾ, ಶಿವಸಂದರ್, ಬಿಜೆಪಿ ಮುಖಂಡರಾದ ರಮೇಶ್ ಕಂಡೆಟ್ಟು, ಭಾಸ್ಕರ್ ಕೆ, ಯೋಗೀಶ್ ಶೆಣೈ, ನವೀನ್ ಶೆಣೈ, ಪದ್ಮನಾಯಕ್, ಅಜಯ್, ಶ್ರೀಕಾಂತ್ ರಾವ್, ಫ್ರೆಡರಿಕ್, ನಿವೇದಿತಾ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.