ಕರಾವಳಿ

ಅಪವಿತ್ರ ಮೈತ್ರಿ ಅಂತ್ಯ : ಬಿಎಸ್‌ವೈ ನೇತೃತ್ವದ ಹೊಸ ಜನಪರ ಸರ್ಕಾರಕ್ಕೆ ಶುಭಹಾರೈಸಿದ ಕ್ಯಾಪ್ಟನ್ ಕಾರ್ಣಿಕ್

Pinterest LinkedIn Tumblr

 

ಮಂಗಳೂರು,ಜುಲೈ.26: ಸನ್ಮಾನ್ಯ ರಾಜ್ಯಪಾಲರು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರಿಗೆ ಹೊಸ ಸರ್ಕಾರ ರಚಿಸಲು ಅಹ್ವಾನಿಸಿರುವುದನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತಾ, ಜನರ ಅಶೋತ್ತರಗಳಿಗೆ ವಿರುದ್ಧವಾಗಿ 2018ರ ಫಲಿತಾಂಶವನ್ನು ಧಿಕ್ಕಾರಿಸಿ ಅಪವಿತ್ರ ಮೈತ್ರಿಯಿಂದ ಅಧಿಕಾರಕ್ಕೇರಿ ಬಿಜೆಪಿಗೆ ಮಾಡಿದ ಅನ್ಯಾಯಕ್ಕೆ ಇದು ಫಲಶ್ರುತಿಯಾಗಿ ನ್ಯಾಯ ದೊರೆತಂತಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

ಮತ್ತೊಮ್ಮೆ ರಾಜ್ಯದಲ್ಲಿ ಜನಪರ ಅಭಿವೃದ್ಧಿ ಕಾರ್ಯಕ್ರಮಗಳ ಪರ್ವ ಈ ಹಿಂದಿನ 2008ರ ಭಾಜಪಾ ಸರ್ಕಾರದಂತೆ ರಾಜ್ಯದ ಜನತೆಗೆ ಶಾಂತಿ ಮತ್ತು ಸುಭೀಕ್ಷೆಯ ಆಡಳಿತವನ್ನುನೀಡಲಿದೆ ಎನ್ನುವ ವಿಶ್ವಾಸದೊಂದಿಗೆ ಬಿ ಎಸ್ ಯಡಿಯೂರಪ್ಪರವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಶುಭಕೋರುತ್ತೇನೆ ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.