ಮಂಗಳೂರು: ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಸೂಚನೆಯಂತೆ ಮಂಗಳೂರು ಮಹಾನಗರ ಪಾಲಿಕೆಯ 53 ನೇ ಬಜಾಲ್ ವಾರ್ಡಿನ ಭವಾನಿ ಕಾಂಪ್ಲೆಕ್ಸ್ ನ ಬದಿಯಿಂದ ಮುಂದಕ್ಕೆ ಹಾದು ಹೋಗುವ ರಸ್ತೆಯು ಆಲ್ವಿನ್ ಕ್ರಾಸ್ತಾ ಮನೆಯ ಹತ್ತಿರದಿಂದ ಮೊಹಮ್ಮದ್ ಮನೆಯ ಬದಿಯಿಂದ ಮುಂದಕ್ಕೆ ಹಾದು ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
ಸ್ಥಳೀಯ ಹಿರಿಯರಾದ ನಾರಾಯಣ ಗಾಣಿಗರವರು ಕಾಮಗಾರಿಗೆ ಚಾಲನೆ ನೀಡಿದರು. ಮನಪಾ ಮಾಜಿ ಸದಸ್ಯ ವಿಜಯ ಕುಮಾರ್ ಶೆಟ್ಟಿ, ಮಂಗಳೂರು ನಗರ ದಕ್ಷಿಣ ಶಕ್ತಿಕೇಂದ್ರದ ಅಧ್ಯಕ್ಷ ಸಂದೀಪ್ ಗರೋಡಿ, ವಾರ್ಡ್ ಅಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿ ಚಂದ್ರಶೇಖರ್ ಜಯನಗರ, ವಾರ್ಡ್ ಪ್ರಭಾರಿ ಶಿವಾಜಿ ರಾವ್, ಸ್ಥಳೀಯರಾದ ತಿಮ್ಮಪ್ಪ ನಾಯಕ್, ರಮೇಶ್ ಬಿ, ಬಿ.ಕೆ. ಮಹಮ್ಮದ್, ಭಾಸ್ಕರ್ ಕೆ, ಆಲ್ವಿನ್ ಕ್ರಾಸ್ತಾ, ಗಣೇಶ್ ಶೆಟ್ಟಿ ಹಾಗೂ ಅನೇಕರು ಉಪಸ್ಥಿತರಿದ್ದರು.
Comments are closed.