ಕರಾವಳಿ

ಶ್ರೀಮತಿ ಭಾಗೀರಥಿ ಮಂಚಿ ಬಾವ ಇವರಿಗೆ ಇಂದು ತುಳು ಅಕಾಡೆಮಿ ಚಾವಡಿ ಸನ್ಮಾನ

Pinterest LinkedIn Tumblr

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿವತಿಯಿಂದ ತುಳುನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಪ್ರತಿ ತಿಂಗಳ ಚಾವಡಿ ಕಾರ್ಯಕ್ರಮದಲ್ಲಿ ಒಬ್ಬ ಸಾಧಕರನ್ನು ಸನ್ಮಾನಿಸಲು ತೀರ್ಮಾನಿಸಿರುವ ಪ್ರಕಾರ ಜೂನ್ 1ರ ಶನಿವಾರ ಅಪರಾಹ್ನ 3.30ಕ್ಕೆ ಅಕಾಡೆಮಿ ಸಿರಿಚಾವಡಿಯಲ್ಲಿ ಹಿರಿಯ ಸಮಾಜ ಸೇವಕಿಯಾದ ಶ್ರೀಮತಿ ಭಾಗೀರಥಿ, ಮಂಚಿ ಬಾವ ಇವರನ್ನು ಸನ್ಮಾನಿಸಲಾಗುವುದು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಶ್ರೀ ಎ. ಸಿ. ಭಂಡಾರಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುತ್ತಾರೆ, ವಿಶ್ವ ಕಲಾನಿಕೇತನ ಕಲಾ ಶಾಲೆಯ ವಿದುಷಿ ನಯನಾ ವಿ ರೈ, ಕುದ್ಕಾಡಿ ಇವರು ಶ್ರೀಮತಿ ಭಾಗೀರಥಿ, ಮಂಚಿ ಬಾವಾ ಇವರನ್ನು ಸನ್ಮಾನಿಸಲಿರುವರು, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮಂಚಿ ಇಲ್ಲಿಯ ಆಡಳಿತ ಮೊಕ್ತೇಸರರಾದ ಶ್ರೀ ಕೈಯ್ಯೂರು ನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಾರ್ವಜನಿಕರು ಈ ಕಾರ್‍ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲ್ಲಿ ಪಾಲ್ಗೊಂಡು ಕಾರ್‍ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಇವರು ವಿನಂತಿಸಿದ್ದಾರೆ.

Comments are closed.