ಅತ್ಯಂತ ಶುದ್ಧರೂಪದಲ್ಲಿರುವ ಶ್ರೀಗಂಧದ ತೈಲವನ್ನು ಆಯುರ್ವೇದದ ಚಿಕಿತ್ಸೆಗಳಲ್ಲಿ ಉದ್ವೇಗ ಶಮನ ಮಾಡಲು ಉಪಯೋಗಿಸುವರು. ಶ್ರೀಗಂಧದ ತೈಲವು ಶರೀರದ ಒಳಗೆ ಮತ್ತು ಹೊರಭಾಗದಲ್ಲಿ ನಂಜು ನಿರೋಧಕವಾಗಿ ಬಳಸಲ್ಪಡುತ್ತದೆ. ಶ್ರೀಗಂಧದ ತೈಲದ ಮುಖ್ಯ ಅಂಗವಾದ ಬೀಟಾ-ಸನಟಾಲ್ ನಂಜನ್ನುಂಟುಮಾಡುವ ಸೂಕ್ಷ್ಮಜೀವಿಗಳನ್ನು ನಿರೋಧಿಸುವ ಗುಣವನ್ನು ಹೊಂದಿದೆ. ವಾಸನಾಚಿಕಿತ್ಸೆ ಮತ್ತು ಸುಗಂಧ ಸಾಬೂನುಗಳ ತಯಾರಿಕೆಯಲ್ಲಿ ಸಹ ಶ್ರೀಗಂಧವನ್ನು ಉಪಯೋಗಿಸುವರು. ಶ್ರೀಗಂಧದ ತೈಲವು ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಗುಣವನ್ನು ಸಹ ಹೊಂದಿದೆ.
* ಚರ್ಮದ ಅಲರ್ಜಿ:ಚರ್ಮದ ಅಲರ್ಜಿಯಿಂದ ಬಳಲುತ್ತಿರುವವರು ಶ್ರೀಗಂಧವನ್ನು ಬಳಸಿದರೆ ಪರಿಣಾಮ ಬೀರುವುದು. ಒಂದು ಟೀ ಚಮಚ ನಿಂಬೇಹಣ್ಣಿನ ರಸದೊಂದಿಗೆ ಶ್ರೀಗಂಧದ ಪುಡಿಯನ್ನು ಬೆರೆಸಿ ಅಲರ್ಜಿಯಿರುವ ಚರ್ಮದ ಮೇಲೆ ಲೇಪಿಸುತ್ತಾ ಬಂದರೆ ಗುಣವಾಗುವುದು.
*ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಇಡಿ. ಈ ಪುಡಿಯನ್ನು ನೀವು ೩೦ ದಿನಗಳವರೆಗೂ ಇಡಬಹುದು. ಈ ಪುಡಿಗೆ ಸ್ವಲ್ಪ ಶ್ರೀಗಂಧದ ಪುಡಿ ಮತ್ತು ಹಾಲನ್ನು ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಮುಖದಲ್ಲಿ ಮೊಡವೆಗಳಿದ್ದರೆ ಈ ಪುಡಿಗೆ ಹಾಲಿನ ಬದಲು ಪನ್ನೀರು ಅಥವಾ ನೀರು ಹಾಕಿ ಕಲಸಿ.
ಔಷಧಿಗಳಲ್ಲಿ ಬಳಕೆ:
*ಶ್ರೀಗಂಧದ ಎಣ್ಣೆ ಕ್ರಿಮಿನಾಶಕ ಗುಣವನ್ನು ಹೊಂದಿದೆ.
*.ಕಫ ಹಾಗೂ ಪಿತ್ತನಾಶಕ ಗುಣವಿದೆ.
*ರಕ್ತದೋಷಗಳನ್ನು ಪರಿಹಾರ ಮಾಡುತ್ತದೆ.
*ಶ್ರೀಗಂಧಯುಕ್ತ ನೀರನ್ನು ಕುಡಿಯುವುದರಿಂದ ಆಯಾಸ ಪರಿಹಾರವಾಗುತ್ತದೆ ಹಾಗೂ ಬಾಯಾರಿಕೆ ನಿವಾರಣೆಯಾಗುತ್ತದೆ.
*ಬಕ್ಕತಲೆಗೆ ಲೇಪಿಸುವುದರಿಂದ ಅಳಿದುಳಿದ ಕೂದಲುದುರುವಿಕೆ ನಿಲ್ಲುತ್ತದೆ.
*ಇದರ ಕಷಾಯ ಉರಿಮೂತ್ರದ ಸಮಸ್ಯೆಗೆ ಉತ್ತಮ ಪರಿಹಾರ.
*ಮೊಸರಿನಲ್ಲಿ ಶ್ರೀಗಂಧವನ್ನು ತೇಯ್ದು ಹಚ್ಚುವುದರಿಂದ ಕಜ್ಜಿ-ತುರಿ, ಸಿಬ್ಬು ಹೋಗುತ್ತದೆ.
*ಶ್ರೀಗಂಧದ ಚಕ್ಕೆ ಹಾಕಿ ಕುದಿಸಿ ಆರಿಸಿದ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮರೋಗಗಳು ನಿವಾರಣೆ ಆಗುತ್ತವೆ.
*ಗಂಧ ತೇಯ್ದು ಅದರಲ್ಲಿ ಕರ್ಪೂರ ಸೇರಿಸಿ ಚೆನ್ನಾಗಿ ತಿಕ್ಕಿ ಹಣೆ ಮತ್ತು ಕಪಾಳಕ್ಕೆ ಹಚ್ಚಿಕೊಂಡರೆ ತಲೆನೋವು ಮಾಯವಾಗುತ್ತದೆ.
*ಬಿರುಕು ಬಂದ ಚರ್ಮಕ್ಕೆ ತೇಯ್ದ ಶ್ರೀಗಂಧವನ್ನು ಹಸುವಿನ ಬೆಣ್ಣೆಯಲ್ಲಿ ಕಲಸಿ ಹಚ್ಚಬೇಕು.
*ಗಂಧದ ಕೊರಡನ್ನು ಜೇನುತುಪ್ಪದಲ್ಲಿ ತೇಯ್ದು ನಾಲಿಗೆಯ ಮೇಲೆ ಹಚ್ಚಿದರೆ ನಾಯಿಕೆಮ್ಮು ನಿವಾರಣೆಯಾಗುತ್ತದೆ.
*ಗಂಧವನ್ನು ನೆಲ್ಲಿಕಾಯಿ ರಸದಲ್ಲಿ ತೇಯ್ದು,ಜೇನುತುಪ್ಪದಲ್ಲಿ ಮಿಶ್ರ ಮಾಡಿ ಸೇವಿಸಿದರೆ ವಾಂತಿ ನಿಲ್ಲುತ್ತದೆ.
*.ಶ್ರೀಗಂಧ ಮತ್ತು ಬಜೆಯನ್ನು ಮಜ್ಜಿಗೆಯಲ್ಲಿ ತೇಯ್ದು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಹಳೆಯ ಜಿಡ್ಡು ಹೋಗುತ್ತದೆ.
*ಮೊಡವೆಗಳ ನಿವಾರಣೆಗೆ ಶ್ರೀಗಂಧ, ಅರಸಿನ ಕೊಂಬನ್ನು ನೀರಿನಲ್ಲಿ ತೇಯ್ದು ಗಂಧ ತಯಾರಿಸಿ ಅದನ್ನು ಹಾಲಿನ ಕೆನೆಯೊಂದಿಗೆ ತಿಕ್ಕಿ ಮುಲಾಮಿನಂತೆ ಮಾಡಿ ಹಚ್ಚಿಕೊಳ್ಳಬೇಕು.
Comments are closed.