ಕರಾವಳಿ

ಪ್ರಕೃತಿ ಚಿಕಿತ್ಸೆಗಾಗಿ ಮತ್ತೆ ಉಡುಪಿಗೆ ಆಗಮಿಸಿದ ಮಾಜಿ ಪಿಎಂ ದೇವೇಗೌಡ ದಂಪತಿ

Pinterest LinkedIn Tumblr

ಉಡುಪಿ: ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಅವರ ಪತ್ನಿ ಚನ್ನಮ್ಮ ಮತ್ತೆ ಐದು ದಿನ ಪ್ರಕೃತಿ ಚಿಕಿತ್ಸೆಗೆಗಾಗಿ ಉಡುಪಿಗೆ ಆಗಮಿಸಿದ್ದಾರೆ.

ಎಚ್.ಡಿ ದೇವೇಗೌಡ ದಂಪತಿ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಬಳಿಕ ಮಂಗಳೂರು ವಿಮಾನ ನಿಲ್ದಾಣ ಮೂಲಕ ಉಡುಪಿಗೆ ಬಂದಿದ್ದಾರೆ. ಕಾಪು ಬಳಿಯ ಮುಳೂರಿನ ಖಾಸಗಿ ರೆಸಾರ್ಟಿನಲ್ಲಿ ದೇವೇಗೌಡರ ಜೊತೆ ಅವರ ಪತ್ನಿ ಚನ್ನಮ್ಮ ಕೂಡ ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ.

ಕಳೆದ ವಾರ ದೇವೇಗೌಡ ಅವರು ಪುತ್ರ ಸಿಎಂ ಕುಮಾರಸ್ವಾಮಿ ಜೊತೆಗೆ ರೆಸಾರ್ಟ್‍ನಲ್ಲೇ ಚಿಕಿತ್ಸೆ ಪಡೆದಿದ್ದರು. ಬಳಿಕ ಈರ್ವರು ಕಾರ್ಯನಿಮಿತ್ತ ಅಲ್ಲಿಂದ ತೆರಳಿದ್ದರು. ಈಗ ದೇವೇಗೌಡರು ತಮ್ಮ ಚಿಕಿತ್ಸೆ ಪೂರ್ಣಗೊಳಿಸಲು ಪತ್ನಿ ಚನ್ನಮ್ಮ ಅವರ ಜೊತೆ ಆಗಮಿಸಿದ್ದಾರೆ.

Comments are closed.