ಮಂಗಳೂರು / ಉಳ್ಳಾಲ : ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ) ಆಶ್ರಯದಲ್ಲಿ ಉಳ್ಳಾಲದ ಶ್ರೀ ಶಾರದಾ ನಿಕೇತನದ ಆವರಣದಲ್ಲಿ ನೂತನವಾಗಿ ಶಿಲಾಮಯವಾಗಿ ನಿರ್ಮಿಸಿದ ನಾಗಬ್ರಹ್ಮಾದಿ ಪಂಚದೈವಿಕ ಸನ್ನಿಧಿಯಲ್ಲಿಇತ್ತೀಚೆಗೆ ಪುನರ್ಪ್ರತಿಷ್ಠೆ- ಬ್ರಹ್ಮಕಲಶೋತ್ಸವ ಹಾಗೂ ಆಶ್ಲೇಷಾ ಬಲಿ ಕಾರ್ಯಕ್ರಮ ಜರಗಿತು.
ಬ್ರ| ಶ್ರೀ ಕುತ್ಯಾರುಕೇಂಜ ಶ್ರೀಧರ ತಂತ್ರಿಗಳ ಪ್ರಧಾನಆಚಾರ್ಯತ್ವದಲ್ಲಿ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯ್ತು. ನಾಗಪಾತ್ರಿ ಬೆಳ್ಳರ್ಪಾಡಿ ರಮಾನಂದ ಭಟ್ಟರಿಂದ ನಾಗದರ್ಶನ ಹಾಗೂ ಬಳಿಕ ಸಾರ್ವಜನಿಕಅನ್ನಸಂತರ್ಪಣೆ ನಡೆಯಿತು.
ಮೂಲಮನೆತನದಕುಟುಂಬಿಕರ ಸಹಿತಊರ ಪರವೂರಧಾರ್ಮಿಕ ಕ್ಷೇತ್ರಗಳ ಪ್ರಮುಖರಲ್ಲದೆ ಸಾರ್ವಜನಿಕರು ಬಹು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಜೀರ್ಣೋದ್ದಾರ ಸಮಿತಿಯಕಾರ್ಯಾಧ್ಯಕ್ಷ ಸುದೇಶ್ ಮರೋಳಿ ಮತ್ತು ಶ್ರೀಮತಿ ಸುಮಿತಾಎಸ್. ಮರೋಳಿ ವೈದಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಜೀರ್ಣೊದ್ಧಾರ ಸಮಿತಿಯಗೌರವಾಧ್ಯಕ್ಷ ಶ್ರೀಕರ ಕಿಣಿ, ಅಧ್ಯಕ್ಷಯು. ಎಸ್. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಭರತ್ಕುಮಾರ್ ಹಾಗೂ ಕೋಶಾಧಿಕಾರಿ ವಿಜಯ ಉಳ್ಳಾಲ್, ಶಾರದಾ ಮಹಿಳಾ ವೇದಿಕೆಯಅಧ್ಯಕ್ಷೆ ಶ್ರೀಮತಿ ರೇಣುಕಾಕಾಂಚನ್ ಮತ್ತು ವೇದಿಕೆಯ ಸದಸ್ಯೆ ಯರು ಉಪಸ್ಥಿತರಿದ್ದರು.
Comments are closed.