ಗಣೇಶಪುರ/ಕಾಟಿಪಳ್ಳ: ಸಮಾಜದಲ್ಲಿ ಸುಪ್ತವಾಗಿ, ಪ್ರಾಮಾಣಿಕರಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವ ಜೆ.ಸಿ.ಐ. ನ `ಸೆಲ್ಯೂಟ್ ದಿ ಸೈಲೆಂಟ್ ವರ್ಕರ್’ ಎಂಬ ಕಾರ್ಯಕ್ರಮವನ್ನು ಗಣೇಶಪುರದಲ್ಲಿ ಆಯೋಜಿಸಲಾಯಿತು. ಸ್ಥಳೀಯ ನಿವಾಸಿ ಹಾಗೂ ಮೆಸ್ಕಾಂ ಬೈಕಂಪಾಡಿ ವಿಭಾಗದ ಲೈನ್ಮೆನ್ ಅಶೋಕ್ ಅವರನ್ನು ಜೆ.ಸಿ.ಐ. ಗಣೇಶಪುರದ ವತಿಯಿಂದ ಸನ್ಮಾನಿಸಲಾಯಿತು.
ಪ್ರಾಸ್ತವಿಕವಾಗಿ ಮಾತನಾಡಿದ ಜೆ.ಸಿ.ಐ. ಗಣೇಶಪುರದ ಅಧ್ಯಕ್ಷ ಉದಯ ಕುಮಾರ್ ಶ್ರೀ ಅಶೋಕ್ ಅವರ ಪ್ರಾಮಾಣಿಕತೆ ಹಾಗೂ ಕಾರ್ಯತತ್ಪರತೆಯನ್ನು ಶ್ಲಾಘಿಸಿದರು. ಸನ್ಮಾನ ಸ್ವೀಕರಿಸಿದ ಅಶೋಕ್ ಜೆ.ಸಿ.ಐ. ಗಣೇಶಪುರದ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅರುಣ್ ಕುಮಾರ್ ಆತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜೆ.ಸಿ.ಐ. ಗಣೇಶಪುರದ ಕಾರ್ಯದರ್ಶಿ ಶಶಿಕುಮಾರ್ ವಂದಿಸಿದರು. ಪೂರ್ವಾಧ್ಯಕ್ಷರಾದ ಶ್ರೀಶ ಕರ್ಮರನ್, ಡಾ.ಸಂಪತ್ ಕುಮಾರ್, ಭಾರತಿ ಶ್ರೀಶ, ಪ್ರಶಾಂತ್ ಕೆ.ಎ., ಯಶೋಧರ್, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
Comments are closed.