ಮಂಗಳೂರು : ನಗರದ ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಇದರ ಮಂಗಳೂರು ರಥೋತ್ಸವ ಪ್ರಯುಕ್ತ ಸಣ್ಣ ರಥೋತ್ಸವ ಶ್ರೀ ಕಾಶಿ ಮಠ ಸಂಸ್ಥಾನದ ಪೀಠಾಧಿಪತಿ ಗಳಾದ ಶ್ರೀಮದ್ ಸಯ್ಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಜರಗಿತು.
ಶ್ರೀ ದೇವರ ವಿಶೇಷವಾಗಿ ಪುಷ್ಪಾಲಂಕೃತ ಬೆಳ್ಳಿ ಲಾಲಕಿಯಲ್ಲಿ ಮೃಗಬೇಟೆ ಉತ್ಸವ ರಥಬೀದಿಯಲ್ಲಿ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು . ಬೆಳಿಗ್ಗೆ ಭವ್ಯ ಯಜ್ಞ ಮಂಟಪದಲ್ಲಿ ಯಜ್ಞರಂಭಗೊಂಡು ಯಜ್ಞ ಆರತಿ , ಮಹಾಬಲಿ , ಪೇಟೆ ಹಗಲೋತ್ಸವ ಬಳಿಕ ಮೃಗಬೇಟೆ, ಸಮಾರಾಧನೆ ತದನಂತರ ಸಣ್ಣ ರಥೋತ್ಸವ ನೆರವೇರಿತು.
ಚಿತ್ರ : ಮಂಜು ನೀರೇಶ್ವಾಲ್ಯ
Comments are closed.