ಕರಾವಳಿ

ದೇವಸ್ಥಾನವಾಗಿ ರೂಪುಗೊಳ್ಳಲಿರುವ ಭಜನಾ ಮಂದಿರ : ಯೆಯ್ಯಾಡಿ ಶ್ರೀರಾಮ ದೇವಸ್ಥಾನಕ್ಕೆ ಶಿಲಾನ್ಯಾಸ

Pinterest LinkedIn Tumblr

ಮಂಗಳೂರು, ಜನವರಿ.25 : ಯೆಯ್ಯಾಡಿ ‌ಐಟಿ‌ಐ ಬಳಿ ಇರುವ ಶ್ರೀರಾಮ ಭಜನಾಮಂದಿರ ಜೀರ್ಣೋದ್ಧಾರದ ಬಳಿಕ ಶ್ರೀರಾಮ ದೇವಸ್ಥಾನವಾಗಿ ರೂಪುಗೊಳ್ಳಲಿದ್ದು ಶ್ರೀರಾಮ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ವಿವಿಧಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ಬೆಳಗ್ಗೆ 8.13ರ ಕುಂಭಲಗ್ನ ಸುಮುಹೂರ್ತದಲ್ಲಿ ಗ್ರಾಮದ ತಂತ್ರೀವರೇಣ್ಯರಾದ ದೇರೇಬೈಲು ಬ್ರಹ್ಮಶ್ರೀ ವಿಠಲದಾಸ ತಂತ್ರಿಗಳವರ ಪೌರೋಹಿತ್ಯದಲ್ಲಿ ಮತ್ತು ವಾಸ್ತುಶಿಲ್ಪಿ ರಾಜ್‌ಕುಮಾರ್‌ ಅವರ ಶಿಷ್ಯ ಶ್ರೀ ಇವರ ಮಾರ್ಗದರ್ಶನದಲ್ಲಿ ನೆರವೇರಿತು.

ಶಿಲಾನ್ಯಾಸ ಸಮಾರಂಭದಲ್ಲಿ ಮೇಯರ್ ಭಾಸ್ಕರ ಮೊಯ್ಲಿ, ಮೂಡಬಿದ್ರೆ ಶಾಸಕ ಉಮಾನಾಥ ಎ. ಕೋಟ್ಯಾನ್, ನಗರಪಾಲಿಕೆ ಸದಸೈ ಶ್ರೀಮತಿ ರೂಪ ಡಿ. ಬಂಗೇರ, ಪ್ರಕಾಶ್ ಪಾಂಡೇಶ್ವರ, ಶ್ರೀನಿವಾಸ್ ನಾಯಕ್, ರಮಾನಂದ್, ಭಾಸ್ಕರ್ ಪೂಜಾರಿ ಹಾಗೂ ಹಲವಾರು ಗಣ್ಯರು ಅಥಿತಿಗಳಾಗಿ ಪಾಲ್ಗೊಂಡಿದ್ದರು.

ಶ್ರೀಮತಿ ಗಣೇಶ್ ಬಂಗೇರ, ಸಮಿತಿಯ ಗೌರವಾಧ್ಯಕ್ಷರಾದ ಪದ್ಮನಾಭ ಕೊಡಿಯಾಲ್‌ಬೈಲ್, ಪ್ರಧಾನ ಕಾರ್ಯದರ್ಶಿ ಮಧುಚಂದ್ರ ಗುರುನಗರ, ಉಪಾಧ್ಯಕ್ಷರಾದ ತುಳಸೀದಾಸ್ ಉರ್ವಾ, ಪ್ರಚಾರ ಸಮಿತಿ ಪ್ರಮುಖರಾದ ಬಾಲಕೃಷ್ಣ ಯೆಯ್ಯಾಡಿ ಈ ಸಂದರ್ಭ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿ‌ ಅಧ್ಯಕ್ಷ ಗಣೇಶ್ ಎ. ಬಂಗೇರ ಪ್ರಸ್ತಾವನೆಗೈದರು. ನಾಡಿನ ಹಿರಿಯರು, ಶ್ರದ್ಧಾಳುಗಳ ಧರ್ಮಚಿಂತನೆಯ‌ ಆಶಯದೊಂದಿಗೆ ಯೆಯ್ಯಾಡಿ ‌ಐಟಿ‌ಐ ಬಳಿ 1926 ರಲ್ಲಿ ಸ್ಥಾಪನೆಗೊಂಡಿದ್ದ ಶ್ರೀರಾಮ ಭಜನಾಮಂದಿರ 1975 ರಲ್ಲಿ ಪುನರ್ ನವೀಕರಣಗೊಂಡು ಶ್ರೀರಾಮ ದೇವರು, ಸೀತಾಮಾತೆ, ಲಕ್ಷ್ಮಣ ಮತ್ತು ಹನುಮಂತದೇವರ ಮೂರ್ತಿ ಪ್ರತಿಷ್ಠೆಯೊಂದಿಗೆ‌ಆರಾಧನೆ ನಡೆಸಲಾಗುತ್ತಿತ್ತು.ಅಂದಿನಿಂದ ಮೊದಲ್ಗೊಂಡು‌ ಈವರೆಗೆ ಮಂದಿರದಕಟ್ಟಡದಲ್ಲಿನ‌ ಅಭಿವೃದ್ಧಿ ಕೆಲಸಗಳು ನಡೆಯದಿರುವುದರಿಂದ ಪ್ರಸ್ತುತ‌ ಇರುವ ಮಂದಿರ ಶಿಥಿಲಾವಸ್ಥೆಗೆ ತಲುಪಿತ್ತು.

ಇದರೊಂದಿಗೆ‌ ಇತ್ತೀಚೆಗೆ ಸಾನಿಧ್ಯದಲ್ಲಿ ಕೆಲವಾರು ನ್ಯೂನತೆಗಳು ಕಂಡು ಬಂದಕಾರಣ ಮಂದಿರದ ಆಡಳಿತ ಸಮಿತಿ ‌ಅಧ್ಯಕ್ಷರಾಗಿರುವ ತಾನು ನಾಡಿನ ಹತ್ತು ಸಮಸ್ತರು, ಭಕ್ತಾದಿಗಳನ್ನು ಒಂದಾಗಿಸಿ ಅಷ್ಟಮಂಗಳ ಪ್ರಶ್ನೆ ಮೂಲಕ ಚಿಂತನೆ ನಡೆಸಿ ವಿಮರ್ಶಿಸಿದಾಗ ಸ್ಥಳ ಸಾನಿಧ್ಯಕ್ಕೆ ಸಂಬಂಧ ಪಟ್ಟ ದೋಷಗಳನ್ನು ಪರಿಹರಿಸಿಕೊಂಡು ಬಳಿಕ ಮಂದಿರದ ಕಟ್ಟಡವನ್ನು ಪುನರ್ ನಿರ್ಮಿಸಿ ದೇವಸ್ಥಾನದ ರೀತಿಯಲ್ಲಿ ಶ್ರೀರಾಮ ದೇವರು ಸಹಿತ ಪರಿವಾರ ದೇವರುಗಳನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ, ಕರ್ಮಗಳನ್ನು ನಡೆಸುತ್ತಾ ಬಂದಲ್ಲಿ ಗ್ರಾಮಕ್ಕೆ ಒಳಿತಾಗುತ್ತದೆ ಎಂಬುದನ್ನು ಕಂಡುಕೊಳ್ಳಲಾಯಿತು.

ತದನಂತರ ಪ್ರಶ್ನೆಯಲ್ಲಿ ಕಂಡು ಕೊಂಡಂತೆ ಕೆಲವಾರು ದೋಷಕ್ಕೆ ಸಂಬಂಧಪಟ್ಟಂತೆ ಪರಿಹಾರಗಳನ್ನು ನಡೆಸಲಾಯಿತು ಆ ಬಳಿಕ ಅಕ್ಟೋಬರ್ 15, 2018 ರಂದುಗ್ರಾಮದ ತಂತ್ರಿಗಳಾದ ವೇದವಿದ್ಯಾಭೂಷಣ ದೇರೇಬೈಲು ಬ್ರಹ್ಮಶ್ರೀ ವಿಠಲದಾಸತಂತ್ರಿಯವರ ಪೌರೋಹಿತ್ಯದಲ್ಲಿ ಮಂದಿರದಲ್ಲಿ‌ ಆರಾಧಿಸಲಾಗುತ್ತಿದ್ದ ಶ್ರೀದೇವರ ವಿಗ್ರಹಗಳನ್ನು, ಪರಿವಾರ ಶಕ್ತಿಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಇದೀಗ ಬಾಲಾಲಯದಲ್ಲಿ ನಿತ್ಯಪೂಜೆಯೊಂದಿಗೆ ವಾರದ ಭಜನಾ ಸಂಕೀರ್ತನೆಗಳು ಇನ್ನಿತರಧಾರ್ಮಿಕ ವಿಧಾನಗಳು ಸಂಪನ್ನಗೊಳ್ಳುತ್ತಿದೆ.

ಇದೀಗ ಇಂದು ಕುಂಭಲಗ್ನ ಸುಮುಹೂರ್ತದಲ್ಲಿ ಶ್ರೀರಾಮ ಭಜನಾಮಂದಿರದ ಜೀರ್ಣೋದ್ಧಾರಕ್ಕಾಗಿ ಶಂಕುಸ್ಥಾಪನೆ ನೆರವೇರಿಸ ಲಾಗಿದ್ದು, ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಕೊಂಡಂತೆ ಜೀರ್ಣೋದ್ಧಾರದ ಬಳಿಕ ಸಾನಿಧ್ಯ ಮಂದಿರದ ಬದಲಾಗಿ ದೇವಾಲಯವಾಗಿ ರೂಪುಗೊಳ್ಳಲಿದೆ. ಈ ಮಹತ್ಕಾರ್ಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಮರ್ಥಜೀರ್ಣೋದ್ಧಾರ ಸಮಿತಿಯನ್ನು ರಚಿಸಲು ಮಂದಿರದ ಪ್ರಾಂಗಣದಲ್ಲಿ ಜನವರಿ 20ರಂದು ವಿವಿಧ ಕ್ಷೇತ್ರಗಳ ಗಣ್ಯರು, ಭಕ್ತರು, ಊರಿನ ಸಮಸ್ತರ ಕೂಡುವಿಕೆಯೊಂದಿಗೆ ಜೀರ್ಣೋದ್ಧಾರ ಸಮಿತಿ ರಚನಾ ಸಭೆ ನಡೆಯಿತು ಎಂದು ಗಣೇಶ್ ಬಂಗೇರ ತಿಳಿಸಿದರು.

Post By Sathish Kapikad

Comments are closed.