ಕರಾವಳಿ

ಹೆಬ್ರಿಯಲ್ಲಿ ದೇವಾಡಿಗ ಸಮಾವೇಶ, ಸನ್ಮಾನ; ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಅಗತ್ಯ: ಡಾ. ಕೆ. ದೇವರಾಜ್‌

Pinterest LinkedIn Tumblr

ಹೆಬ್ರಿ : ದೇವರಿಗೆ ಹತ್ತಿರವಿರುವ ದೇವಾಡಿಗ ಸಮುದಾಯ ಯಾವ ಸಮುದಾಯದ ವಿರುದ್ಧವೂ ಹೋಗದೆ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಜೀವನ ನಡೆಸುತ್ತಿದ್ದಾರೆ. ಸಂಘಟನೆಯ ಮೂಲಕ ಸಮಾಜ ಸೇವೆ ಮಾಡುತ್ತಾ ಸಮಾಜ ಬಾಂಧವರ ಸಮಸ್ಯೆಯನ್ನು ಬಗೆಹರಿಸಿ, ಮಕ್ಕಳ ಶಿಕ್ಷ ಣಕ್ಕೆ ಇನ್ನಷ್ಟೂ ಪ್ರೋತ್ಸಾಹ ನೀಡುತ್ತಾ ಬಂದರೆ ಸಂಘವು ಬಲಗೊಳ್ಳಲು ಸಾಧ್ಯ ಎಂದು ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷ ಡಾ. ಕೆ. ದೇವರಾಜ್‌ ಹೇಳಿದರು.

ಹೆಬ್ರಿ ದೇವಾಡಿಗ ಸುಧಾರಕ ಸಂಘದ 9ನೇ ವರ್ಷದ ದೇವಾಡಿಗ ಸಮಾವೇಶವನ್ನು ಉದ್ಫಾಟಿಸಿ ಅವರು ಮಾತನಾಡಿದರು.

ಶಾಸಕ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಸಮಾಜ ಬಾಂಧವರನ್ನು ಒಟ್ಟು ಸೇರಿಸಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಸಂತೋಷದ ಸಂಗತಿ. ಸಂಘವು ಕುಟುಂಬಗಳನ್ನು ಒಗ್ಗೂಡಿಸಿ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮುನ್ನಡೆಯುತ್ತಿದೆ. ಶಿಕ್ಷ ಣದಲ್ಲಿ ನಮ್ಮ ಜಿಲ್ಲೆ ಮುಂದಿದ್ದರೂ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಹೋಗುವ ಕೊರತೆ ಇದೆ. ಶಿಕ್ಷ ಣದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಹೆಬ್ರಿ ಸಂಘದ ಕಟ್ಟಡ ಕಾಮಗಾರಿಗೆ ಶಾಸಕರ ನಿಧಿಯಿಂದ 5ಲಕ್ಷ ಅನುದಾನ ನೀಡುವುದಾಗಿ ಹೇಳಿದರು.

ಸಂಘದ ಅಧ್ಯಕ್ಷ ಶಂಕರ್‌ ದೇವಾಡಿಗ ಚಾರ ಅಧ್ಯಕ್ಷ ತೆ ವಹಿಸಿದ್ದರು. ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ, ಪಂಚಾಯಿತಿ ಅಧ್ಯಕ್ಷ ಎಚ್‌.ಕೆ ಸುಧಾಕರ್‌, ಜಿಲ್ಲಾ ದೇವಾಡಿಗ ಸಂಘದ ಅಧ್ಯಕ್ಷ ಸೀತಾರಾಮ್‌ ಕೆ., ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್‌ ಕಾರ್ಯದರ್ಶಿ ಗಣೇಶ್‌ ದೇವಾಡಿಗ, ಪ್ರಧಾನ ಕಾರ್ಯದರ್ಶಿ ನರಸಿಂಹ ದೇವಾಡಿಗ ಧ.ಗ್ರಾ. ಯೋಜನೆಯ ಹೆಬ್ರಿ ವಲಯ ಮೇಲ್ವಿಚಾರಕ ಪ್ರವೀಣ್‌, ಕಾರ್ಕಳ ಸಂಘದ ಅಧ್ಯಕ್ಷ ಹರೀಶ್‌ ದೇವಾಡಿಗ, ಮಹಿಳಾ ಅಧ್ಯಕ್ಷೆ ಪ್ರಮೀಳಾ, ಕಾರ್ಯದರ್ಶಿ ಶಂಭು ದೇವಾಡಿಗ, ಶೀನ ಸೇರಿಗಾರ, ಸೂರ್ಯದೇವಾಡಿಗ, ರೀನಾ ದೇವಾಡಿಗ ಹೆಬ್ರಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಾಗಸ್ವರ ವಾದಕ ಅಣ್ಣುದೇವಾಡಿಗ ಧರ್ಮಸ್ಧಳ, ಗುರುಪ್ರಸಾದ್‌ ಗುಳಿಬೆಟ್ಟು, ಕ್ರೀಡಾಸಾಧನೆ ಮಾಡಿದ ವಿದ್ಯಾರ್ಥಿಗಳಾದ ಗೌರವ್‌, ವಿಕ್ರಮಾರ್ಜುನ, ಸೈನಿಕ ಎಚ್‌. ಪ್ರದೀಪ್‌ ದೇವಾಡಿಗ ಪೋಷಕರನ್ನು ಗೌರವಿಸಲಾಯಿತು.

ಸಾಮೂಹಿಕ ಸತ್ಯನಾರಾಯಣ ಪೂಜೆ, ಪುರಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ವೈವಿಧ್ಯ, ಸ್ಯಾಕ್ಸೋಫೋನ್‌ ವಾದನ ಸಮಾಜ ಬಾಂಧವರಿಂದ ನಡೆಯಿತು. ಕಟ್ಟಡ ಸಮಿತಿಯ ಅಧ್ಯಕ್ಷ ಎಚ್‌. ಜನಾದನ್‌ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಿ.ಜಿ. ರಾಘವೇಂದ್ರ, ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

Comments are closed.