ಕರಾವಳಿ

ರಾಜ್ಯ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ ಮಂಗಳೂರಿನ ಆದಿತ್ಯ ಶೆಣೈ

Pinterest LinkedIn Tumblr

ಮಂಗಳೂರು : ಕರ್ನಾಟಕ ರಾಜ್ಯ ಮಟ್ಟದ ಅಂತರ್ ಶಾಲಾ / ಕಾಲೇಜು ಕರಾಟೆ ಚಾಂಪಿಯನ್ ಶಿಪ್ 2019 ರ ಸ್ಪರ್ಧೆಯಲ್ಲಿ ಮಂಗಳೂರು ನಗರದ ಕೆನರಾ ಹೈಸ್ಕೂಲ್ ಉರ್ವಾ ಇದರ 5 ನೇ ತರಗತಿ ವಿದ್ಯಾರ್ಥಿ ಕೆ . ಆದಿತ್ಯ ಶೆಣೈ ರಾಜ್ಯದಲ್ಲಿ ತೃತೀಯ ( ಕಂಚಿನ ಪದಕ ) ಸ್ಥಾನ ಪಡಕೊಂಡಿರುತ್ತಾರೆ.

ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಹಾಗೂ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಆಲೈಡ್ ಆರ್ಟ್ಸ್ ಮಂಗಳೂರು ಇದರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಸ್ಪರ್ಧೆ ನಡೆದಿದ್ದು ರಾಜ್ಯದ ವಿವಿಧ ಭಾಗಗಳಿಂದ ಸುಮಾರು 350 ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.

ಹಳದಿ ಬೆಲ್ಟ್ ಹುಡುಗರ 10 ವರ್ಷದ ವಿಭಾಗದಲ್ಲಿ ಆದಿತ್ಯ ಶೆಣೈ ತೃತೀಯ ಸ್ಥಾನಪಡಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ . ದಿನಾಂಕ 13 ಮತ್ತು 14 ರಂದು ಈ ಸ್ಪರ್ಧೆ ಆಯೋಜಿಸಲಾಗಿತ್ತು.

Comments are closed.