ಕರಾವಳಿ

ಜ. 8: ಬಂಟರ ಮಾತೃ ಸಂಘದಿಂದ ಐಪಿ‌ಎಸ್ ಡಾ. ಮಧುಕರ ಶೆಟ್ಟಿಗೆ ಸಂತಾಪ ಸಭೆ

Pinterest LinkedIn Tumblr

ಮಂಗಳೂರು : ಐಪಿ‌ಎಸ್ ಅಧಿಕಾರಿ ಡಾ ಮಧುಕರ ಶೆಟ್ಟಿ ಅವರ ಅಕಾಲಿಕ ನಿಧನಕ್ಕೆ ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಸಾರ್ವಜನಿಕ ಸಂತಾಪ ಸಭೆ ಜನವರಿ 8ರಂದು ಮಂಗಳವಾರ ಸಂಜೆ ೫.೩೦ಕ್ಕೆ ಬಂಟ್ಸ್ ಹಾಸ್ಟೆಲ್ ಬಳಿಯ ಶ್ರೀ ರಾಮಕೃಷ್ಣ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಸಂತಾಪ ಸಭೆಯಲ್ಲಿ ನಿವೃತ್ತ ಲೋಕಯುಕ್ತ ನ್ಯಾ| ಸಂತೋಷ್ ಹೆಗ್ಡೆ , ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಹಾಗೂ ಸಂಸದರು , ಶಾಸಕರು ಭಾಗವಹಿಸಲಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದಕ್ಷ, ಪ್ರಾಮಾಣಿಕ ಐಪಿ‌ಎಸ್ ಅಧಿಕಾರಿ ಡಾ. ಮಧುಕರ ಶೆಟ್ಟಿಯವರ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸುವಂತೆ ಬಂಟರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ವಿನಂತಿಸಿದ್ದಾರೆ.

Comments are closed.