ಕರಾವಳಿ

ದ.ಕ. ಜಿಲ್ಲಾ ಎಸ್ಪಿ ರವಿಕಾಂತೇಗೌಡ‌ರಿಗೆ ಭಡ್ತಿ – ವರ್ಗಾವಣೆ : ನೂತನ ಎಸ್ಪಿಯಾಗಿ ಲಕ್ಷ್ಮಿಪ್ರಸಾದ್ ನೇಮಕ

Pinterest LinkedIn Tumblr

ನೂತನ ಎಸ್ಪಿ ಲಕ್ಷ್ಮಿಪ್ರಸಾದ್

ಮಂಗಳೂರು: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಡಾ. ಬಿ.ಆರ್. ರವಿಕಾಂತೇಗೌಡ ಅವರು ಬೆಂಗಳೂರು ಪೊಲೀಸ್ ಫೈರ್ ಸರ್ವಿಸಸ್ ವಿಭಾಗದ ಐಜಿಪಿಯಾಗಿ ಭಡ್ತಿ ಹೊಂದಿದ್ದು, ತೆರವಾದ ಸ್ಥಾನಕ್ಕೆ ಬಿ.ಎಂ. ಲಕ್ಷ್ಮಿಪ್ರಸಾದ್ ಅವರನ್ನು ಸರ್ಕಾರ ನೇಮಕಗೊಳಿಸಿದೆ.

ಡಾ. ಬಿ.ಆರ್. ರವಿಕಾಂತೇಗೌಡ

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಿ.ಎಂ. ಲಕ್ಷ್ಮಿಪ್ರಸಾದ್ ಭಡ್ತಿ ಹೊಂದಿದ್ದು, ಜ.1ರಿಂದ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸಿಬ್ಬಂದಿ ಹಾಗೂ ಆಡಳಿತಾತ್ಮಕ ಸುಧಾರಣೆ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಲಕ್ಷ್ಮಿಪ್ರಸಾದ್ ಈ ಮೊದಲು ಬೆಂಗಳೂರು ಆಂತರಿಕ ಭದ್ರತಾ ವಿಭಾಗ (ಸಿಸಿಟಿ-ಸೆಂಟರ್ ಫಾರ್ ಕೌಂಟರ್ ಟೆರರಿಸಂ)ದ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು.

Comments are closed.