ಕರಾವಳಿ

ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಪಾರ್ಥಿವ ಶರೀರ ಇಂದು ಮಂಗಳೂರಿಗೆ : ಅಂತಿಮ ದರ್ಶನಕ್ಕೆ ವ್ಯವಸ್ಥೆ.

Pinterest LinkedIn Tumblr
ಮಂಗಳೂರು: ರಾಜ್ಯದ ಹೆಮ್ಮೆಯ ನಿಷ್ಠಾವಂತ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ರವರ ಪಾರ್ಥಿವ ಶರೀರ ಇಂದು ರಾತ್ರಿ 8.30ಕ್ಕೆ ಹೈದ್ರಾಬಾದ್ ನಿಂದ ಬೆಂಗಳೂರು ಮೂಲಕ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ
ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸಕಲ ಸರಕಾರೀ ಗೌರವ ಸಲ್ಲಿಸಿ. ರಾತ್ರಿ 9.15 ರಿಂದ 10.30ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದೆಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ರವರು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಕಮೀಷನರ್ ರವರೊಂದಿಗೆ ಚರ್ಚೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಚಿವ ಯು.ಟಿ.ಖಾದರ್ ರವರು ಸೂಚನೆ ನೀಡಿರುತ್ತಾರೆ.
ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ:
ದಿನಾಂಕ 28-12-208 ರಂದು ವಿಧಿವಶರಾದ ಡಾ.ಕೆ.ಮಧುಕರ್ ಶೆಟ್ಟಿ ಐ.ಪಿ.ಎಸ್ ರವರ ಪಾರ್ಥಿವ ಶರೀರವು ದಿನಾಂಕ 29-12-2018 ರಂದು ರಾತ್ರಿ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ಡಾಣಕ್ಕೆ ಆಗಮಿಸಲಿದ್ದು, ಈ ದಿನ ರಾತ್ರಿ 9-00 ಗಂಟೆಯಿಂದ 10-00 ಗಂಟೆಯ ವರೆಗೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ಡಾಣದಲ್ಲಿ ಡಾ.ಕೆ. ಮಧುಕರ್ ಶೆಟ್ಟಿ ಐ.ಪಿ.ಎಸ್ ರವರಿಗೆ ಮಂಗಳೂರು ನಗರ ಕಮಿಷನರೇಟ್ ವತಿಯಿಂದ ಭಾವಪೂರ್ವ ಶೃಧಾಂಜಲಿ ಸಮರ್ಪಿಸಲಾಗುವುದು. ಈ ಸಮಯದಲ್ಲಿ ನಗರದ ಪ್ರಮುಖರಿಗೆ ಮತ್ತು ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ

Comments are closed.