ಉಡುಪಿ: ಕುಡಿದ ಮತ್ತಿನಲ್ಲಿ ಸ್ನೇಹಿತರಿಬ್ಬರು ಜಗಳ ಮಾಡಿಕೊಂಡು,ಒಬ್ಬನನ್ನು ಕೊಲೆ ಮಾಡಿದ ಘಟನೆ ಮಲ್ಪೆ ಬಂದರಿನ ಬೋಟಿನ ಒಳಗೆ ನಡೆದಿದೆ.
ಮೀನುಗಾರಿಕೆಗೆ ತೆರಳಿದ್ದ ಬೋಟ್ ರಿಪೇರಿಗೆ ಎಂದು ದಡಕ್ಕೆ ಬಂದಿತ್ತು. ಬೋಟಿನಲ್ಲಿದ್ದವರೆಲ್ಲಾ ಮನೆಗೆ ತೆರಳಿದ್ದರು.ಕೊಪ್ಪಳದ ಮಾರುತಿ ಮತ್ತು ಒರಿಸ್ಸದ ಪ್ರೀತಮ್ ಎಂಬವರು ಬೋಟಿನಲ್ಲಿ ಉಳಿದುಕೊಂಡಿದ್ದರು.ರಾತ್ರಿಯಲ್ಲಿ ಮಾರುತಿ ಮತ್ತು ಪ್ರೀತಮ್ ಬೋಟಿನ ಒಳಗೆ ಪಾರ್ಟಿ ಮಾಡಿದ್ದಾರೆ.ಕುಡಿದ ಮತ್ತಿನಲ್ಲಿ ಜಗಳ ಮಾಡಿಕೊಂಡು,ಮಾರುತಿ ಆಯುಧದಿಂದ ಪ್ರೀತಮ್ ಮೇಲೆ ಹಲ್ಲೆ ನಡೆಸಿದ್ದಾನೆ,ರಕ್ತದ ಮಡುವಿನಲ್ಲಿ ಪ್ರೀತಮ್ ಸಾವನ್ನಪ್ಪಿದ್ದಾನೆ.ನಂತರ ಆರೋಪಿ ಮಾರುತಿ ಪರಾರಿಯಾಗಿದ್ದಾನೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.